Thursday, April 09, 2015

PRESS NOTE



 

  • ದಿನಾಂಕ 29/04/2015 ರಂದು ಕುಂದಾಪುರ ತಾಲೂಕು ಬೈಂದೂರು ಠಾಣಾ ವ್ಯಾಪ್ತಿಯ ಗೊಳಿ ಹೊಳೆ ಗ್ರಾಮದ ಅರೆ ಶಿರೂರು ಎಂಬಲ್ಲಿ ಕೆ.ಸಿ.ಡಿ.ಸಿ ಲಿಮಿಟೆಡ್ ಗೆ   ಸಂಬಂಧಿಸಿದ ಗೇರು ಪ್ಲಾಂಟೇಶನಲ್ಲಿ ಗೇರು ಬೀಜ ತುಂಬಿಸಿ ಇಟ್ಟಿದ್ದ ಚೀಲಗಳನ್ನು  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋದ ಪ್ರಕರಣವನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಕೆ.ಅಣ್ಣಾಮಲೈ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಎಡಿಷನಲ್ ಎಸ್ಪಿ  ಶ್ರೀ ಸಂತೋಷ ಕುಮಾರ್, ಹಾಗೂ ಕುಂದಾಪುರ ಡಿವೈಎಸ್ಪಿ ಶ್ರೀ  ಮಂಜುನಾಥ್ ಶೆಟ್ಟಿ ರವರ ನಿರ್ದೇಶನದಲ್ಲಿ  ಉಡುಪಿ ಡಿ.ಸಿ.ಐ.ಬಿ  ಪೊಲೀಸ್  ತಂಡ  ಬೇಧಿಸಿರುತ್ತಾರೆ.ದಿನಾಂಕ 09/04/2015 ರಂದು ಬೆಳಿಗ್ಗೆ  ಖಚಿತ ವರ್ತಮಾನದ ಮೇರೆಗೆ  ಲಕ್ಷ್ಮಣ  ಮರಾಠಿ ಭಟ್ಕಳ, ಲಿಂಗು ಮರಾಠಿ ರವರನ್ನು  ದಸ್ತಗಿರಿ ಮಾಡಿ ತೀವ್ರ ವಿಚಾರಣೆ  ಮಾಡಿದ ಬಳಿಕ ಅವರು ಕಳವಿನ ಬಗ್ಗೆ ಒಪ್ಪಿಕೊಂಡು ಕಳವಿಗೆ ಸಹಕರಿಸಿದ ಇತರ ಆರೋಪಿತರನ್ನು ತಿಳಿಸಿದ ಮೇರೆಗೆ ವೆಂಕ, ಮೋಹನ, ದೇವು, ದಯಾನಂದರವರನ್ನು ದಸ್ತಗಿರಿ ಮಾಡಿದ್ದು  ಸುಮಾರು 25,000/- ಮೌಲ್ಯದ  5 ಗೋಣೆ  ಚೀಲ ತುಂಬಿದ  ಗೇರು ಬೀಜವನ್ನು ಹಾಗೂ ಸಾಗಾಟಕ್ಕೆ ಬಳಸಿದ ಮಾರುತಿ ಕಾರನ್ನು ವಶಪಡಿಸಿಕೊಂಡು ಬೈಂದೂರು ಠಾಣೆಗೆ ಹಸ್ತಾಂತರಿಸಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಡಿ.ಸಿ.ಐ.ಬಿ ಪೊಲೀಸ್ ನಿರೀಕ್ಷಕರಾದ ಟಿ .ಆರ್ ಜೈ ಶಂಕರ್, ಸಂತೋಷ ಎ ಕಾಯ್ಕಿಣೆ, ಪಿ.ಎಸ್.ಐ ಬೈಂದೂರು ಎ.ಎಸ್.ಐ ರೋಸಾರಿಯೋ ಡಿಸೋಜ, ಸಿಬ್ಬಂದಿಗಳಾದ ಸಂತೋಷ ನಿಟ್ಟೂರು, ಸಂತೋಷ ಕುಂದರ್, ಚಂದ್ರ ಶೆಟ್ಟಿ, ರಾಮು ಹೆಗ್ಡೆ ಸುರೇಶ, ರಾಘವೇಂದ್ರ ಉಪ್ಪುಂದ, ಪ್ರವೀಣ, ಥಾಮ್ಸನ್, ಚಾಲಕ  ಚಂದ್ರಶೇಖರ್‌ರವರು  ಪಾಲ್ಗೊಂಡಿರುತ್ತಾರೆ.

No comments: