Saturday, April 04, 2015

Daily Crime Reports As on 04/04/2015 at 17:00 Hrs



ಅಪಘಾತ ಪ್ರಕರಣ

  • ಬ್ರಹ್ಮಾವರ:  ದಿನಾಂಕ: 02/04/2015 ರಂದು ಸಂಜೆ 4:45 ಗಂಟೆಗೆ ಉಡುಪಿ ತಾಲೂಕು ಕೆಂಜೂರು ಗ್ರಾಮದ ಕೆಂಜೂರು ಹಾಲು  ಡೈರಿಯಿಂದ ಸ್ವಲ್ಪ ಮುಂದೆ ಕೊಕ್ಕರ್ಣೆ - ಹೆಬ್ರಿ ರಸ್ತೆಯ ತಿರುವಿನಲ್ಲಿ ಆರೋಪಿ ರಾಜೀವ ಶೆಟ್ಟಿಯು ತನ್ನ ಬಾಬ್ತು ಎಮ್‌ಹೆಚ್‌ -02- ಎನ್‌ಎ -7429 ನೇ ಸ್ಯಾಂಟ್ರೋ ಕಾರನ್ನು ಹೆಬ್ರಿ ಕಡೆಯಿಂದ ಕೊಕ್ಕರ್ಣೆ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಕ್ಕರ್ಣೆ ಕಡೆಯಿಂದ ಹೆಬ್ರಿ ಕಡೆಗೆ ಪಿರ್ಯಾದಿ ದಿನೇಶ್ ನಾಯ್ಕ ಇವರು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್‌ ನಂಬ್ರ ಕೆಎ-20-ಇಜಿ-1284ನೇ ದಕ್ಕೆ ಬಲ ಬದಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಗುದ್ದಿದ ನೋವಾಗಿದ್ದು, ಸಹಸವಾರ ಈಶ್ವರ್ ನಾಯ್ಕ ರವರಿಗೆ ಕಾಲಿಗೆ ತೀವ್ರ ತರಹದ ಗಾಯವಾಗಿದ್ದು ಅಲ್ಲದೇ ಆರೋಪಿ ಕಾರು ಚಾಲಕ ರಾಜೀವ ಶೆಟ್ಟಿ ಮತ್ತು ಕಾರಿನಲ್ಲಿದ್ದ ಪ್ರವೀಣ್ ಶೆಟ್ಟಿ ರವರಿಗೆ ಸಾದಾ ಗಾಯವಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 55/15 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

No comments: