ಅಪಘಾತ ಪ್ರಕರಣ
- ಶಂಕರನಾರಾಯಣ: ದಿನಾಂಕ 28/03/2015 ರಂದು ಬೆಳಿಗ್ಗೆ 8:30 ಗಂಟೆಗೆ ಕುಂದಾಪುರ ತಾಲೂಕು ಅಂಪಾರು ಗ್ರಾಮದ ಹೊಲೋ ಬ್ಲಾಕ್ ಫ್ಯಾಕ್ಟರಿಯ ಹತ್ತಿರ ಕುಂದಾಪುರ ಸಿದ್ದಾಪುರ ಮುಖ್ಯ ರಸ್ತೆಯ ಇಳಿಜಾರಿನಲ್ಲಿ ಆರೋಪಿ ರಾಘವೇಂದ್ರ ರವರು ಕೆಎ 20 ವೈ 3050 ನೇ ಹೋಂಡಾ ಆ್ಯಕ್ಟೀವ್ ವಾಹನವನ್ನು ಕುಂದಾಪುರದಿಂದ ಅಂಪಾರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ವಾಹನ ಆರೋಪಿಯ ಹತೋಟಿ ತಪ್ಪಿ ರಸ್ತೆ ಬದಿಯಲ್ಲಿ ಬಿದ್ದು ಅಪಘಾತವಾಗಿದ್ದು, ಅಪಘಾತದ ಪರಿಣಾಮ ಸದ್ರಿ ವಾಹನದಲ್ಲಿ ಸಹಸವಾರರಾಗಿದ್ದ ಮಂಜುನಾಥ ನಾಯ್ಕ (49) ತಂದೆ: ಬಚ್ಚು ನಾಯ್ಕ ವಾಸ: ವೆಂಕಮ್ಮ ನಿಲಯ, ಮೊವಾಡಿ ತ್ರಾಸಿ ಗ್ರಾಮ ಕುಂದಾಪುರ ತಾಲೂಕು ರವರಿಗೆ ಎಡಕಾಲು ಹಾಗೂ ಎಡಕೈಗೆ ತೀವ್ರ ತರದ ರಕ್ತಗಾಯವಾಗಿರುತ್ತದೆ ಎಂಬುದಾಗಿ ಮಂಜುನಾಥ ರವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 50/15 ಕಲಂ 279, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment