ಅಪಘಾತ ಪ್ರಕರಣ
- ಉಡುಪಿ: ಪಿರ್ಯಾದುದಾರರಾದ ನೂರ್ ಪಾತಿಮಾ (30) ಗಂಡ:ಅಬ್ದುಲ್ ರೆಹಮಾನ್ ವಾಸ: ಎಸ್.ಡಿ.ಎಮ್ ಹಿಂದೆ ಕುತ್ಪಾಡಿ, ಉಡುಪಿ ರವರು ದಿನಾಂಕ 24/11/2014 ರಂದು ತನ್ನ ಕೆಎ-06-ಇಬಿ-9564 ನೇ ಹೋಂಡಾ ಆಕ್ಟೀವಾ ಸ್ಕೂಟರ್ ನಲ್ಲಿ ತನ್ನ ಅತ್ತೆ ಯವರನ್ನು ಸಹ ಸವಾರಳಾಗಿ ಕುಳ್ಳಿರಿಸಿಕೊಂಡು ಉದ್ಯಾವರ ಕುತ್ಪಾಡಿ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿರುವಾಗ ಬಲಾಯಿಪಾದೆ ಜಂಕ್ಷನ್ ಬಳಿ ಕಿನ್ನಿಮುಲ್ಕಿ ಒಳ ರಸ್ತೆ ಪ್ರವೇಶಿಸುವರೇ ಬಲಾಯಿಪಾದೆ ರಾ.ಹೆ.66 ನ್ನು ಕ್ರಾಸ್ ಮಾಡಲು ರಸ್ತೆ ಪಶ್ಚಿಮ ಬದಿಯಲ್ಲಿ ಸ್ಕೂಟರ್ ನ್ನು ನಿಲ್ಲಿಸಿಕೊಂಡಿರುವಾಗ ಸಮಯ ಸುಮಾರು ರಾತ್ರಿ 7.00 ಗಂಟೆಗೆ ಉಡುಪಿ ಕಡೆಯಿಂದ ಕಟಪಾಡಿ ಕಡೆಗೆ ಒಬ್ಬಾತ ಕಾರು ಚಾಲಕನು ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ವಾಹನವೊಂದನ್ನು ಓವರ್ಟೇಕ್ ಮಾಡುವ ಭರದಲ್ಲಿ ರಸ್ತೆಯ ತೀರ ಬಲಬದಿಗೆ ಬಂದು ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಎಡಕಾಲಿನ ಮೊಣಗಂಟಿನ ಮೇಲ್ಭಾಗದಲ್ಲಿ ಗಾಯ ಆಗಿರುತ್ತದೆ. ಡಿಕ್ಕಿ ಪಡಿಸಿದ ಕಾರಿನ ನಂಬ್ರ ಕೆಎ-21-ಎನ್-6413 ಎಂಬುದಾಗಿದ್ದು ಕಾರಿನ ಚಾಲಕನ ಹೆಸರು ತಿಳಿದಿಲ್ಲ. ನಂತರ ಪಿರ್ಯಾದಿದಾರರ ಅತ್ತೆ ಮತ್ತು ಅಲ್ಲಿ ಸೇರಿದವರು ಪಿರ್ಯಾದುದಾರರನ್ನು ಒಂದು ವಾಹನದಲ್ಲಿ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬುದಾಗಿ ನೂರ್ ಪಾತಿಮಾ ರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 121/2014 ಕಲಂ 279, 337 ಐ.ಪಿ,ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
- ಉಡುಪಿ: ದಿನಾಂಕ: 25/11/14ರಂದು ಫಿರ್ಯಾದಿದಾರರಾದ ಶ್ರೀಮತಿ ಗೀತಾ ರವಿ ಶೇಟ್ (46) ಗಂಡ ರವಿ ಶೇಟ್ ವಾಸ: ನಿವೇದಿತ 1ನೇ ಕ್ರಾಸ್ ಒಳಕಾಡು ಉಡುಪಿ ತಾಲೂಕು ಎಂಬವರಿಗೆ ಮಹೇಶ ಶಣೈ ಎಂಬವರು ಪೋನ್ ಮಾಡಿ ಉಡುಪಿ ಬೀಡಿನಗುಡ್ಡೆ ಮೈದಾನದಲ್ಲಿ ಓರ್ವ ವ್ಯಕ್ತಿ ಮಲಗಿದ ಸ್ಧಿತಿಯಲ್ಲೆ ಮೃತ ಪಟ್ಟಿರುವುದಾಗಿ ತಿಳಿಸಿದ್ದು ಫಿರ್ಯಾದಿದಾರರು ಹೋಗಿ ನೋಡದಾಗ ಸುಮಾರು 50-55 ವರ್ಷ ಪ್ರಾಯದ ಗಂಡಸು ಮಲಗಿದ ಸ್ಧಿತಿಯಲ್ಲಿ ಮೃತಪಟ್ಟಿರುವುದು ಕಂಡು ಬಂತು ಮೃತರ ಹೆಸರು ವಿಳಾಸ ತಿಳಿದು ಬಾರದೇ ಇದ್ದು ಗುರುತು ಪತ್ತೆಯಾಗಿರುವುದಿಲ್ಲ ಮೃತರು ಭಿಕ್ಷಾಟನೆ ಮಾಡಿ ಜೀವನ ನಡೆಸುವರೆಂದು ಕಂಡು ಬಂದಿದ್ದು ಸುಮಾರು 2 ದಿನಗಳ ಹಿಂದೆ ಸರಿಯಾಗಿ ಅನ್ನ ಆಹಾರ ಇಲ್ಲದೆ ಅಥವಾ ಬೇರೆ ಯಾವುದೋ ಕಾಯಲೆಯಿಂದ ಮೃತಪಟ್ಟಿರ ಬಹುದಾಗಿದೆ ಎಂಬುದಾಗಿ ಶ್ರೀಮತಿ ಗೀತಾ ರವಿ ಶೇಟ್ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 66/2014 ಕಲಂ 174 ಸಿ.ಆರ್.ಪಿ,ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
- ಶಿರ್ವಾ: ಪಿರ್ಯಾದಿದಾರರಾದ ಮಹೇಶ್ ಪ್ರಾಯ 35 ವರ್ಷ, ತಂದೆ:ನಾರಾಯಣ ಮುಖಾರಿ ವಾಸ : ತೆಕ್ಕರ ಪಲ್ಕೆ, ಶಿರ್ವಗ್ರಾಮ, ಉಡುಪಿ ತಾಲೂಕು ರವರ ತಂದೆ 65 ವರ್ಷ ಪ್ರಾಯದ ನಾರಾಯಣ ಮುಖಾರಿ ಎಂಬವರು ವಯೋವೃದ್ಧರಾಗಿದ್ದು, ಕುಡಿತದ ಚಟ ಇದ್ದು ಅಲ್ಲದೆ ಅನಾರೋಗ್ಯದಿಂದ ಬಳಲುತ್ತಿದ್ದು. ದಿನಾಂಕ 25.11..2014 ರಂದು 13:00 ಗಂಟೆಗೆ ಶಿರ್ವ ಗ್ರಾಮದ ಕಾಂತಿ ಬಾರ್ನ ಹಿಂಬದಿಯಲ್ಲಿ ಹಾಳಾಗಿ ನಿಂತಿದ್ದ ಆಟೋರಿಕ್ಷಾದಲ್ಲಿ ಮಲಗಿದ್ದವರು ರಿಕ್ಷಾದಲ್ಲೇ ಮೃತಪಟ್ಟಿರುವುದಾಗಿದೆ ಎಂಬುದಾಗಿ ಮಹೇಶ್ ರವರು ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 15/2014 ಕಲಂ 174 ಸಿ.ಆರ್.ಪಿ,ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment