ಅಸ್ವಾಭಾವಿಕ ಮರಣ ಪ್ರಕರಣ
- ಕಾರ್ಕಳ: ದಿನಾಂಕ 27/11/2014 ರಂದು ಬೆಳಗ್ಗೆ 10:00 ಗಂಟೆಯಿಂದ 11:00 ಗಂಟೆಯ ಮಧ್ಯೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆ ಅಡ್ಡಾಲು ಎಂಬಲ್ಲಿ ಪಿರ್ಯದುದಾರರಾದ ಕುಮಾರಿ ಶಾಂತಿ, (28), ತಂದೆ ಕಿಟ್ಟು, ವಾಸ ಅಡ್ಡಾಲು ನಕ್ರೆ ಕುಕ್ಕುಂದೂರು ಗ್ರಾಮ ಇವರೊಂದಿಗೆ ವಾಸವಿದ್ದ ಪಿರ್ಯಾದುದಾರರ ಅಕ್ಕ ಸುಮತಿ, ಪ್ರಾಯ 34 ವರ್ಷ ಎಂಬವರು ತನಗಿರುವ ಖಾಯಿಲೆ ಮತ್ತು ಸಾಲದಿಂದ ಮನನೊಂದು ಮನೆಯ ಛಾವಡಿಯಲ್ಲಿರುವ ಅಡ್ಡಕ್ಕೆ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬುದಾಗಿ ಕುಮಾರಿ ಶಾಂತಿ ಇವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 52/2014 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
No comments:
Post a Comment