Wednesday, November 26, 2014

Daily Crime Reported As On 26/11/2014 At 17:00Hrs




ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ದಿನಾಂಕ 26/11/2014ರಂದು ಬೆಳಿಗ್ಗೆ 9:30ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ನಿತ್ಯಾನಂದ ಒಳಕಾಡು  (54) ತಂದೆ ದಿ. ರಾಮ ವಾಸ ಸರಳಾಯ ಕಂಪೌಂಡ್‌‌ ಒಳಕಾಡು ಉಡುಪಿ ಇವರು ವೈಯಕ್ತಿಕ ಕೆಲಸದ ನಿಮಿತ್ತ ಉಡುಪಿ ಗೀತಾಂಜಲಿ ಟಾಕೀಸಿನ ಎದುರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಟಿವಿಎಸ್‌‌ ಶೋ ರೂಮ್‌ನ ಎದುರು ರಸ್ತೆ ಪಕ್ಕದಲ್ಲಿ  ಜನರು ಗುಂಪು ಸೇರಿದ್ದನ್ನು ನೋಡಿ ಹೋಗಿ ವಿಚಾರಿಸಲಾಗಿ ಓರ್ವ ಅಪರಿಚಿತ ವ್ಯಕ್ತಿ ಪ್ರಾಯ ಸುಮಾರು 38 ರಿಂದ 40 ವರ್ಷ ಗಂಡಸು ಯಾವುದೋ ಖಾಯಿಲೆಯಿಂದ ಬಳಲಿ ಅಸ್ವಸ್ಧಗೊಂಡು ರಸ್ತೆಯ ಬದಿಯಲ್ಲಿ ಬಿದ್ದು ಮೃತ ಪಟ್ಟಿರುವುದಾಗಿದೆ ಎಂಬುದಾಗಿ ನಿತ್ಯಾನಂದ ಒಳಕಾಡು ಇವರು ನೀಡಿದ  ದೂರಿನಂತೆ ಉಡುಪಿ ನಗರ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 67/14 ಕಲಂ 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರತ್ತದೆ.  

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 26/11/2014 ರಂದು ಬೆಳಿಗ್ಗೆ 8:00 ಗಂಟೆಗೆ ಕಾರ್ಕಳ ತಾಲೂಕು ಕಾರ್ಕಳ ಕಸಬಾ ಗ್ರಾಮದ ಕಾಬೆಟ್ಟು ಜಂಕ್ಷನ್ ಬಳಿ ಅಬು ಸಾಹೇಬರ ಅಂಗಡಿಯ ಎದುರು ರಸ್ತೆಯಲ್ಲಿ  KA 20EF 4111ನೇ ಮೋಟಾರ್ ಸೈಕಲ್ ನ್ನು ಅದರ ಸವಾರ ಅಜೇಯ ಎಂಬವರು ಗ್ಯಾಲಕ್ಸಿ ಕಡೆಯಿಂದ ಕಾಬೆಟ್ಟು ಜಂಕ್ಷನ್ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಸ್ತೆ ತೀರಾ ಬಲಬದಿಗೆ ಬಂದು ರಸ್ತೆಯ ಬಲಬದಿಯಲ್ಲಿ ಕಾಬೆಟ್ಟು ಜಂಕ್ಷನ್ ಕಡೆಯಿಂದ ಗ್ಯಾಲಕ್ಸಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ರಾಘು ಪೂಜಾರಿಯವರಿಗೆ ಡಿಕ್ಕಿ ಹೊಡೆದ ಪರಿಣಾಮ ರಾಘು ಪೂಜಾರಿಯವರು ಡಾಮರು ರಸ್ತೆಗೆ ಬಿದ್ದು ತಲೆಗೆ ತೀವ್ರಗಾಯಗೊಂಡಿದ್ದು ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿರುವುದಾಗಿದೆ ಎಂಬುದಾಗಿ ಪಿರ್ಯಾದಿದಾರರಾಧ ಶ್ರೀ  ಮೊಹಮ್ಮದ್ ಹನೀಫ್  (42), ತಂದೆ ದಿವಂಗತ ಉಮ್ಮರಬ್ಬ, ವಾಸ ಚೋಲ್ಪಾಡಿ  ಕಾಬೆಟ್ಟು ಕಸಬಾ  ಗ್ರಾಮ ಕಾರ್ಕಳ ತಾಲೂಕು ಇವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 197/2014 ಕಲಂ 279, 304 (ಎ) ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: