Wednesday, November 26, 2014

Daily Crime Reported As On 26/11/2014 At 19:30 Hrs




ಮುನುಷ್ಯ ಕಾಣೆ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ನಾಗೇಶ (34) ತಂದೆ ಶ್ರೀನಿವಾಸ್ ಚಾಪಾಡಿ ಮನೆ ಗೋಪಾಢಿ ಕೋಟೇಶ್ವರ ಕುಂದಾಪುರ ತಾಲೂಕು ಇವರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಅನುಕೇಶವ ಎಂಬ ಮೀನುಗಾರಿಕೆ ಬೋಟ್ ನಲ್ಲಿ ಕುಂದಾಪುರ ಗೋಪಾಡಿ ಮಂಜುನಾಥ (25)  ಇವರು ಮೀನುಗಾರಿಕೆಯ ಕೆಲಸ ಮಾಡುತ್ತಿದ್ದು. ದಿನಾಂಕ 25.11.2014  ರಂದು ರಾತ್ರಿ 22:00 ಗಂಟೆಗೆ ಗಂಗೊಳ್ಳಿಯ ಬಂದರಿನಲ್ಲಿ ಮೀನು ಖಾಲಿ ಮಾಡುತ್ತೀರುವ ಸಮಯ ಪಿರ್ಯಾದಿದಾರರೊಂದಿಗೆ ಇದ್ದ ಮಂಜುನಾಥನು ಮೀನು ಖಾಲಿ ಮಾಡುತ್ತಿದ್ದ ಬೋಟಿನಿಂದ ಇನ್ನೊಂದು ಬೋಟಿಗೆ ಹೋಗುವರೇ ಪ್ರಯತ್ನಿಸುತ್ತಿರುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದುದ್ದು ಪತ್ತೆಯಾಗಿರುವುದಿಲ್ಲ. ಈ ತನಕ ದಡಕ್ಕೆ ಬಂದಿರುವುದಿಲ್ಲ  ನಾಗೇಶ ಇವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 193/ 2014 ಕಲಂ ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.  

ಇತರ ಪ್ರಕರಣ 

  • ಗಂಗೊಳ್ಳಿ ದಿನಾಂಕ 26/11/2014 ರಂದು ಬೆಳಿಗ್ಗೆ ಜಾವ 04.00 ಗಂಟೆಯ ಸಮಯಕ್ಕೆ ಮರವಂತೆ ಬೀಚ್ ನಲ್ಲಿ ಆಪಾದಿತರಾದ 1). ರಫಿಕ್ ಪ್ರಾಯ 42 ವರ್ಷ, 2). ಆರೀಫ್ ಬ್ಯಾರಿ ಪ್ರಾಯ 42 ವರ್ಷ ಇವರುಗಳು  KA 20P 8442 ನೇ ಓಮಿನಿಯಲ್ಲಿ ಮಾರಕಾಯುಧಗಳಾದ ಹಾರೆ. ಮರದ ದೊಣ್ಣೆಯನ್ನು ಹಾಕಿಕೊಂಡು ಸೂರ್ಯಸ್ತ ಮತ್ತು ಸೂರ್ಯೋದಯ ನಡುವೆ ಯಾವುದೋ ಬೇವಾರಂಟು ತಕ್ಷೀರು ನಡೆಸುವ ಉದ್ದೇಶದಿಂದ ಶಂಸಯಾಸ್ಪದ ರೀತಿಯಲ್ಲಿ ಸಂಚರಿಸಿಕೊಂಡು, ತಮ್ಮ ಇರುವಿಕೆಯನ್ನು ಮರೆಮಾಚಿಕೊಂಡಿದ್ದಲ್ಲದೇ ತಮ್ಮ ಇರುವಿಕೆಯ ಬಗ್ಗೆ  ಸಮರ್ಪಕವಾದ  ಉತ್ತರವನ್ನು  ನೀಡದೇ ಇರುವ ಕಾರಣ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಎ.ಎಸ್.ಐ ವೆಂಕಟೇಶ ಭಟ್ ಎಂಬವರು ಅವರಿಬ್ಬರನ್ನು ದಸ್ತಗಿರಿಮಾಡಿರುವುದಾಗಿದೆ ಈ ಬಗ್ಗೆ ಠಾಣಾ ಅಪರಾದ ಕ್ರಮಾಂಕ 192/2014 ಕಲಂ 96 KP ACTನಂತೆಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ. 

No comments: