Sunday, November 23, 2014

Daily Crime Reported As On 23/11/2014 At 19:30 Hrs

ಅಸ್ವಾಭಾವಿಕ ಮರಣ ಪ್ರಕರಣ
  • ಶಂಕರನಾರಯಣ: ದಿನಾಂಕ 23/11/2014 ರಂದು ರಾಘವೇಂದ್ರ ಪೂಜಾರಿಯವರು ಕುಂದಾಪುರ ತಾಲೂಕು 74 ಉಳ್ಳೂರು ಗ್ರಾಮದ ಹಳ್‌ ನೀರುಕೊಡ್ಲು ಎಂಬಲ್ಲಿ ಗಾರೆ ಕೆಲಸ ಮಾಡಿ ಸಮಯ ಸುಮಾರು 13.00 ಗಂಟೆ ಹೊತ್ತಿಗೆ ವಾರಾಹಿ ವದಿ ಸ್ನಾನಕ್ಕೆಂದು ಹೋದವರು ನದಿ ನೀರಿನ ಸೆಳೆತಕ್ಕೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಎಂಬುದಾಗಿ ಪಿರ್ಯಾದಿದಾರರಾದ ಚಂದ್ರ (30) ತಂದೆ ರಾಮ ಪೂಜಾರಿ ವಾಸ: ಕುಂಬ್ರಿಜೆಡ್ಡು 74 ಉಳ್ಳೂರು ಗ್ರಾಮ ಕುಂದಾಪುರ ತಾಲೂಕು ಇವರು ನೀಡಿದ ದೂರಿನಂತೆ ಶಂಕರನಾರಯಣ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 30/2014 ಕಲಂ 174 ಸಿ.ಅರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಅಪಘಾತ ಪ್ರಕರಣ
  • ಶಿರ್ವಾ: ದಿನಾಂಕ 20/11/2014ರಂದು ಸಂಜೆ ಸಮಯ 7:00 ಗಂಟೆಗೆ ಪಿರ್ಯಾದಿದಾರರಾದ ಐರಿನ್‌ ತಾವ್ರೊ (53) ಗಂಡ ಇಗ್ನೇಷಿಯಸ್‌ ತಾವ್ರೊ ವಾಸ: ಐರಿನ್‌ ತಾವ್ರೊ ಕಾಟೇಜ್‌, ಕಳತ್ತೂರು ಚರ್ಚ್‌ ಹತ್ತಿರ, ಕಳತ್ತೂರು ಗ್ರಾಮ ಉಡುಪಿ ಇವರ ಮನೆಯ ಸಮೀಪದ ಅಂಗಡಿಯಿಂದ ವಸ್ತುಗಳನ್ನು ಖರೀದಿಸಿ ವಾಪಾಸು ಮನೆ ಕಡೆಗೆ ಕಳತ್ತೂರು ಚರ್ಚ ಬಳಿ ಕಳತ್ತೂರು ಸಾರ್ವಜನಿಕ ರಸ್ತೆಯಲ್ಲಿ ನಡೆದು ಕೊಂಡು ಬರುತ್ತಿರುವಾಗ ಕೆಎ20 ಇಎಫ್‌ 5575ನೇದರ ಮೋಟಾರು ಸೈಕಲ್‌ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಬೈಕ್‌ನ್ನು ಚಲಾಯಿಸಿಕೊಂಡು ಬಂದು ರಸ್ತೆಯ ಬದಿ ನಡೆದು ಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಕುಸಿದು ಬಿದ್ದು ಆ ನಂತರ ಚಿಕಿತ್ಸೆಯ ಬಗ್ಗೆ ಟಿಎಮ್‌ಎ ಪೈ ಆಸ್ಪತ್ರೆ ಉಡುಪಿಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ವೈದ್ಯರ ಸೂಚನೆಯಂತೆ ವಾಪಾಸ್ಸು ಮನೆಗೆ ಬಂದಿದ್ದು ಮರು ದಿನ ಬೆಳಿಗ್ಗೆ ತಲೆ, ಕುತ್ತಿಗೆ ದೇಹದಲ್ಲಿ ವಿಪರೀತ ನೋವು ಉಂಟಾದ ಪರಿಣಾಮ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ ಮೋಟಾರು ಸೈಕಲ್‌ ಸವಾರ ವೈದ್ಯಕೀಯ ವೆಚ್ಚ ನೀಡುವುದಾಗಿ ಅ ಸಮಯ ತಿಳಿಸಿದ್ದು ನಂತರ ನೀಡದೇ ಇದ್ದುದಾಗಿದೆ ಎಂಬುದಾಗಿ ಐರಿನ್‌ ತಾವ್ರೊ ಇವರು ನೀಡಿದ ದೂರಿನಂತೆ ಶಿರ್ವಾ ಠಾಣಾ ಅಪರಾಧ ಕ್ರಮಾಂಕ 163/2014 ಕಲಂ 279, 337  ಐಪಿಸಿ ಮತ್ತು 187 ಐಎಮ್‌ವಿ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: