ಹಲ್ಲೆ ಪ್ರಕರಣ
- ಕಾಪು: ದಿನಾಂಕ 20-11-2014 ರಂದು 15-35 ಗಂಟೆಗೆ ಪಿರ್ಯಾದಿ ದಿನೇಶ್ ರವರು ತನ್ನ ಆಟೋ ರಿಕ್ಷಾ ನಂಬ್ರ ಕೆಎ -20-ಡಿ-1095 ರಲ್ಲಿ ಆರೋಪಿ ಇಲಿಯಾಸ್ ಹಾಗೂ ಆತನ ಪತ್ನಿ ಮತ್ತು ಮಗುವನ್ನು ರಿಕ್ಷಾ ದಲ್ಲಿ ಕರೆದುಕೊಂಡು ಕಟಪಾಡಿ ಪೂಜಾ ಬೇಕರಿ ತಲುಪುವಾಗ ಓರ್ವ ಹೆಂಗಸು ರಸ್ತೆಗೆ ಅಡ್ಡ ಬರುವುದನ್ನು ಕಂಡು ಪಿರ್ಯಾದಿದಾರರು ಬ್ರೇಕ್ ಹಾಕಿದಾಗ ಹಿಂದಿನಿಂದ ಬೈಕ್ ಸವಾರ ರಿಕ್ಷಾಕ್ಕೆ ತಾಗಿಸಿದ ಕಾರಣ ಪಿರ್ಯಾದಿದಾರರು ರಿಕ್ಷಾ ನಿಲ್ಲಿಸಿ ಬೈಕ್ ಸವಾರನಲ್ಲಿ ವಿಚಾರಿಸುತಿದ್ದಾಗ ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಆರೋಪಿಗಳಾದ ಅಲ್ತಾಪ್ ಮತ್ತು ಇಲಿಯಾಸ್ ಅವಾಚ್ಯ ಶಬ್ದಗಳಿಂದ ಬೈದು ನೆಲಕ್ಕೆ ದೂಡಿ ಹಾಕಿ ಕೈಯಿಂದ ಕೆನ್ನೆಗೆ ಮತ್ತು ಎದೆಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 220/2014 ಕಲಂ 341,323,504,506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
ಹುಡುಗಿ
ಕಾಣೆ
- ಪಡುಬಿದ್ರಿ: ಪಿರ್ಯಾದಿ ಶ್ರೀಮತಿ ಶಾಂತ ಎಸ್ ಕೋಟ್ಯಾನ್ ಇವರ ಮಗಳು ಸೌಮ್ಯ (22ವರ್ಷ) ಪದವೀಧರೆಯಾಗಿದ್ದು ಮನೆಯಲ್ಲಿಯೇ ಇದ್ದಳು. ದಿನಾಂಕ: 19.11.2014 ರಂದು ರಾತ್ರಿ 11.30 ಗಂಟೆಗೆ ಎಲ್ಲರೊಂದಿಗೆ ಊಟ ಮಾಡಿ, ತನ್ನ ಗೆಳತಿ ದೀಕ್ಷಾ ಹಾಗೂ ಅಜ್ಜಿಯೊಂದಿಗೆ ಅವಳ ಕೋಣೆಯಲ್ಲಿ ಮಲಗಿದವಳು ದಿನಾಂಕ: 20.11.2014 ರಂದು ಬೆಳಿಗ್ಗೆ 6.30 ಗಂಟೆಗೆ ಪಿರ್ಯಾದಿದಾರರು ಬಂದು ನೋಡಲಾಗಿ ಮನೆಯಲ್ಲಿ ಇಲ್ಲದೇ ಕಾಣೆಯಾಗಿರುತ್ತಾಳೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 122/14 ಕಲಂ: ಹುಡುಗಿ ಕಾಣೆಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment