Wednesday, October 29, 2014

Daily Crime Reports as on 29/10/2014 at 17:00 Hrs

ಮನುಷ್ಯ ಕಾಣೆ ಪ್ರಕರಣ
  • ಬ್ರಹ್ಮಾವರ : ದಿನಾಂಕ: 26/10/2014 ರಂದು ಬೆಳಿಗ್ಗೆ 11:30 ಗಂಟೆಗೆ ಉಡುಪಿ ತಾಲೂಕು, ಕೆಂಜೂರು ಗ್ರಾಮದ ನುಕ್ಕಿಬೆಟ್ಟು  ಬಾಬಣ್ಣ ನಾಯ್ಕ 35 ವರ್ಷ ಎಂಬವರು ಮಾನಸಿಕ ರೋಗಿಯಾಗಿದ್ದು ಮನೆ ಬಿಟ್ಟು ಹೋದವರು ಮನೆಗೆ ವಾಪಾಸ್ಸು ಬಾರದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 199/2014 ಕಲಂ:  ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಕುಂದಾಪುರ: ತಿಮ್ಮಪ್ಪ ಮೊಗವೀರ ಅವರ ಹೆಂಡತಿ ಮುತ್ತುರವರು ದಿನಾಂಕ: 16/10/2014 ರಂದು ಮಧ್ಯಾಹ್ನ 2:00 ಗಂಟೆಗೆ ಸಮಯ ಜಡ್ಡಿನ  ಮನೆ, ಜಪ್ತಿ ಗ್ರಾಮ ಎಂಬಲ್ಲಿ ಮನೆಯ ತೋಟದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ತೆಂಗಿನ ಮರದ ಗರಿ ಮುತ್ತು ಅವರ ಹತ್ತಿರ ಬಿದ್ದ  ಪರಿಣಾಮ ತೆಂಗಿನ ಮರದ ಗರಿಯಲ್ಲಿ ಗೂಡು ಕಟ್ಟಿದ ಜೇನ್ನೋಣಗಳು ಅವರಿಗೆ ಮುಖಕ್ಕೆ ಹಾಗೂ ದೇಹದದ ಭಾಗಗಳಿಗೆ ಕಚ್ಚಿ ಅಸ್ವಸ್ಥಗೊಂಡವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದು, ದಿನಾಂಕ: 29/10/2014 ರಂದು ಚಿಕಿತ್ಸೆ ಫಲಕಾರಿಯಾಗದೇ ಮುತ್ತು ಅವರು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 57/2014 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ 

No comments: