ಕಳವಿಗೆ ಯತ್ನ ಪ್ರಕರಣ
- ಕೋಟ: ರಾಜೇಶ್.ಬಿ ರವರು ಉಡುಪಿ ತಾಲೂಕು ಶಿರಿಯಾರ ಗ್ರಾಮದ ಸಾಯಿಬ್ರಕಟ್ಟೆ ಎಂಬಲ್ಲಿ ವಿಜಯ ಬ್ಯಾಂಕ್ ಬ್ರಾಂಚ್ ಮ್ಯಾನೇಜರ್ ಆಗಿದ್ದು ದಿನಾಂಕ-02/09/2014 ರಂದು ರಾತ್ರಿ 7:18 ಕ್ಕೆ ಬ್ರಾಂಚ್ ಬಾಗಿಲು ಹಾಕಿ ನಿರ್ಗಮಿಸಿದ್ದು, ದಿನಾಂಕ-03/09/2014 ರಂದು ಬೆಳಿಗ್ಗೆ 08:45 ಗಂಟೆಗೆ ಕರ್ತವ್ಯಕ್ಕೆ ಬಂದಾಗ ಸದ್ರಿ ಬ್ಯಾಂಕ್ನ ಸಿಬ್ಬಂದಿಯವರಾದ ರಾಜೇಶ ಎಂಬವರು ತಮ್ಮ ಶಾಖೆಯ ಎ.ಟಿ.ಎಂ.ನ ಮಾನಿಟರ್ ಒಡೆದು ಹೋದ ವಿಷಯ ತಿಳಿಸಿದ್ದು ಆಗ ಹೋಗಿ ನೋಡಿದಾಗ ಎ.ಟಿ.ಎಂ ಮಾನಿಟರ್ ಜಖಂ ಗೊಂಡಿರುತ್ತದೆ. ಬಳಿಕ ಬ್ಯಾಂಕ್ನ ಸಿಸಿ ಕ್ಯಾಮರವನ್ನು ಪರಿಶೀಲಿಸಲಾಗಿ ದಿನಾಂಕ-03/09/2014 ರಂದು 04:40 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬ ಎ.ಟಿ.ಎಂ ರೂಮ್ಗೆ ಪ್ರವೇಶ ಮಾಡಿ ಕಳ್ಳತನ ಮಾಡಲುವ ಸಲುವಾಗಿ ಎ.ಟಿ.ಎಂ ಯಂತ್ರದ ಮಾನಿಟರ್ ಜಖಂಗೊಳಿಸಿದ್ದು ಸಿ.ಸಿ ಕ್ಯಾಮರದಲ್ಲಿ ದಾಖಲಾಗಿದ್ದು ಸದ್ರಿ ವ್ಯಕ್ತಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂದು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 190/2014 ಕಲಂ: 457,380,511 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment