Monday, September 01, 2014

Daily Crime Reports as on 01/09/2014 at 19:30 Hrs

ಅಪಘಾತ ಪ್ರಕರಣ
  • ಕೊಲ್ಲೂರು: ದಿನಾಂಕ 29/08/2014 ರಂದು ಬೆಳಿಗ್ಗೆ 10.30. ಗಂಟೆಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಬಸ್ ನಿಲ್ದಾಣದಲ್ಲಿ ಕೆ.ಎ 19 ಎ.ಎ. 2549 ನೇ ಬಸ್ಸಿನ ಚಾಲಕನು ತನ್ನ ಬಸ್ಸನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಸ್ಸು ನಿಲ್ದಾಣದಲ್ಲಿರುವ ಮೆಸ್ಕಾಂ ವಿದ್ಯುತ್ ಸರಬರಾಜು ಕಂಪೆನಿಗೆ ಸೇರಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಂಬ ತುಂಡಾಗಿ ಬಿದ್ದಿದ್ದು, ಮೆಸ್ಕಾಂ ಇಲಾಖೆಗೆ ಸುಮಾರು 8493/- ರೂಪಾಯಿ ನಷ್ಟವಾಗಿದ್ದು, ಈ ಅಪಘಾತಕ್ಕೆ ಬಸ್ ಚಾಲಕನ ಅತೀ ವೇಗ ಹಾಗೂ ನಿರ್ಲಕ್ಷತನದ ಚಾಲನೇ ಕಾರಣವಾಗಿರುತ್ತದೆ ಎಂಬುದಾಗಿ ಸಂತೋಷ್ ನಾಯ್ಕ್ ರವರು ಶಾಖಾಧಿಕಾರಿ ಕೊಲ್ಲೂರು ಮೆಸ್ಕಾಂ ಕಾರ್ಯ ಮತ್ತು ಪಾಲನಾ ಶಾಖೆ ಕೊಲ್ಲೂರುರವರು ನೀಡಿದ ದೂರಿನಂತೆ ಕೊಲ್ಲೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 58/2014 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಮಲ್ಪೆ: ಸುರೇಶ ಆಚಾರ್ಯ ತಂದೆ: ಕಾಳಯ್ಯ ವಾಸ: ವಾಸ: ಮಾಧ್ವನಗರ ಕೊಡವೂರು ಗ್ರಾಮರವರ ಭಾವನಾದ 63 ವರ್ಷ ಪ್ರಾಯದ ಶ್ರೀಧರ ಆಚಾರ್ಯ ಎಂಬುವರು ದಿನಾಂಕ 01/09/14 ರಂದು ಬೆಳ್ಳಿಗ್ಗೆ 10:45 ಹೃದಯಘಾತದಿಂದ ನರಳುತ್ತಿದ್ದು ಈ ಬಗ್ಗೆ ಸುರೇಶ ಆಚಾರ್ಯ ರವರು ತನ್ನ ಭಾವನಿಗೆ ಚಿಕಿತ್ಸೆ ಕೊಡುವ ಬಗ್ಗೆ ಒಂದು ಆಟೋ ರಿಕ್ಷಾದಲ್ಲಿ ಉಡುಪಿಯ ಟಿ ಎಮ್ ಐ ಪೈ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈಧ್ಯರು ಶ್ರೀಧರ ಆಚಾರ್ಯ (63) ರವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಸುರೇಶ ಆಚಾರ್ಯರವರ ಭಾವ ಶ್ರೀಧರ ಆಚಾರ್ಯರವರು 2 -3 ವಾರಗಳ ಹಿಂದೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬಿದ್ದಿದ್ದು ಅಂದಿನಿಂದ ಅಸೌಖ್ಯದಿಂದ ಇದ್ದು  ಈ ದಿನ ಬೆಳ್ಳಿಗೆ ಹೃದಯಘಾತದಿಂದ ಮೃತಪಟ್ಟಿರುವುದಾಗಿದೆ ಎಂಬುದಾಗಿ ಸುರೇಶ ಆಚಾರ್ಯರವರು ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 39/2014 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪರಿಚಿತ ಶವ ಪತ್ತೆ
  • ಕಾಪು: ಉದ್ಯಾವರ ಪಂಚಾಯತ್ ಅಧ್ಯಕ್ಷರು ಪೋನ್ ಮಾಡಿ ಉದ್ಯಾವರ ಮಟ್ಟು ಕೊಪ್ಲ ಅರಬ್ಬಿ ಸಮುದ್ರದ ದಡದಲ್ಲಿ ಓರ್ವ ಅಪರಿಚಿತ ಗಂಡಸಿನ ಶವ ಇರುವ ಬಗ್ಗೆ ಮಾಹಿತಿ ತಿಳಿಸಿದ ಮೇರೆಗೆ ನಾರಾಯಣ ಕೊಟ್ಯಾನ್ ತಂದೆ :ಕೃಷ್ಣ ಪೂಜಾರಿ ವಾಸ :ಕಲಾಯಿಬೈಲು ಪಿತ್ರೋಡಿ ಉದ್ಯಾವರ ಗ್ರಾಮ ಉಡುಪಿರವರು ಮಧ್ಯಾಹ್ನ  ಸುಮಾರು 1.10 ಗಂಟೆಗೆ ಉದ್ಯಾವರ ಮಟ್ಟು ಕೊಪ್ಲ ರಾಮ ಭಜನಾಮಂದಿರದ ಬಳಿ ಸಮುದ್ರ ದಡದಲ್ಲಿ  ಹೋಗಿ ನೋಡಲಾಗಿ ಓರ್ವ ಸುಮಾರು 45ರಿಂದ 50 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತ ದೇಹ ಬಿದ್ದಿದ್ದು ಅದು ಕೊಳೆತು ಹೋಗಿದ್ದು , ಅದನ್ನು ಜಲಚರಗಳು ತಿಂದಿರುವುದು ಕಂಡು ಬರುತ್ತದೆ. ಮೂಳೆಗಳು ಹೊರಗೆ ಕಾಣುತ್ತಿದ್ದು  ಮೃತನು ಕೆಂಪು ಬಣ್ಣದ ಬರ್ಮುಡ ಧರಿಸಿರುತ್ತಾನೆ. ,ಮೃತನು ಸುಮಾರು 10-15 ದಿನಗಳ ಹಿಂದೆ ಸಮುದ್ರದ ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವುದಾಗಿದೆ ಎಂಬುದಾಗಿ ನಾರಾಯಣ ಕೊಟ್ಯಾನ್ ರವರು ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 25/2014 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: