ಹಲ್ಲೆ
ಪ್ರಕರಣ
- ಅಜೆಕಾರು : ದಿನಾಂಕ: 01/09/2014 ರಂದು ಮದ್ಯಾಹ್ನ 12:05 ಗಂಟೆಗೆ ಕಾರ್ಕಳ ತಾಲೂಕು ಶಿರ್ಲಾಲು ಗ್ರಾಮದ ಹಾಡಿಯಂಗಡಿ, ಹೊಸಬೆಟ್ಟು ಮನೆ ಎಂಬಲ್ಲಿ ಆರೋಪಿ ಪ್ರದೀಪ್ ಎಂಬಾತನು ಕತ್ತಿ ಹಿಡಿದು ಸುಧೀರ್ ತಂದೆ: ದೇಜು ಶೆಟ್ಟಿ ವಾಸ: ಹೊಸಬೆಟ್ಟು ಮನೆ, ಹಾಡಿಯಂಗಡಿ ಶಿರ್ಲಾಲು ಗ್ರಾಮ ಕಾರ್ಕಳ ಇವರ ಮನೆಗೆ ಅಕ್ರಮ ಪ್ರವೇಶ ಮಾಡಿ ಅವ್ಯಾಚ ಶಬ್ದಗಳಿಂದ ಬೈದು ಮನೆಯಲ್ಲಿದ್ದ ಪಿಠೋಪಕರಣಗಳನ್ನು ದ್ವಂಸ ಪಡಿಸಿ ಸುಧೀರ್ ಇವರನ್ನು ಹೊರಗೆ ದೂಡಿ ಅವರ ಅಕ್ಕ ಸುಪ್ರೀಮ ಎಂಬವಳನ್ನು ಬೆನ್ನಟ್ಟಿಕೊಂಡು ಹೋಗಿ ಅವಳಿಗೆ ಕತ್ತಿಯಿಂದ ಕಡಿದು ಗಾಯಗೊಳಿಸಿರುತ್ತಾರೆ. ಆರೋಪಿತರ ಮನೆಯ ಕೋಳಿಯನ್ನು ಸುಧೀರ್ ಮನೆಯವರು ವಿಷ ಹಾಕಿ ಕೊಂದಿರುತ್ತಾರೆಂದು ತಪ್ಪು ತಿಳಿದು ಆರೋಪಿ ಪ್ರದೀಪನ ತಂದೆ ಕೃಷ್ಣ ಶೆಟ್ಟಿ ಎಂಬವರು ತಮ್ಮ ಮಗನ ಕೈಯಲ್ಲಿ ಕತ್ತಿಕೊಟ್ಟು ಕೊಲೆ ಮಾಡಲು ತನ್ನ ಮಗನಿಗೆ ದುಷ್ಪ್ರೇರಣೆ ಮಾಡಿ ಸುಧೀರ್ ಅಕ್ಕ ಸುಪ್ರೀಮಳನ್ನು ಕೊಲ್ಲುವ ಉದ್ದೇಶದಿಂದ ಈ ಕೃತ್ಯ ಮಾಡಿರುವುದಾಗಿದೆ ಎಂಬುದಾಗಿ ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 44/14 ಕಲಂ 448, 504, 427, 323, 324, 307, 114 , ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
- ಬ್ರಹ್ಮಾವರ : ದಿನಾಂಕ: 31/08/2014 ರಂದು 22.00 ಗಂಟೆಯಿಂದ ದಿನಾಂಕ: 01/09/2014 ರಂದು ಬೆಳಿಗ್ಗೆ 7 ಗಂಟೆಯ ಮದ್ಯದ ಅವಧಿಯಲ್ಲಿ ಉಡುಪಿ ತಾಲೂಕು ಹೇರಾಡಿ ಗ್ರಾಮದ ರಂಗನಕೇರಿ ಇಂಡಿಯನ್ ಗೇರು ಬೀಜ ಪ್ಯಾಕ್ಟರಿಯಲ್ಲಿ ಪವನ್ ಕೆ ಡಿ (19) ತಂದೆ: ದೇವರಾಜ್ ವಾಸ: ಸೋಮವಾರಪೇಟೆ, ಕೊಡಗು ಜಿಲ್ಲೆ ಇವರೊಂದಿಗೆ ಕೆಲಸ ಮಾಡುತ್ತಿರುವ ಸುಮಾರು 23 ವರ್ಷ ಪ್ರಾಯದ ಸುನೀಲ್ ಕುಮಾರ್ ಕೆ.ಸಿ ಎಂಬವರು ವಿಪರೀತ ಅಮಲು ಸೇವನೆ ಚಟದವರಾಗಿದ್ದು ಹಾಗೂ ತುಂಬಾ ಸಾಲ ಇರುವುದರಿಂದ ಅಥವಾ ಬೇರೆ ಯಾವುದೋ ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ರಂಗನಕರೆ ಇಂಡಿಯನ್ ಗೇರುಬೀಜ ಪ್ಯಾಕ್ಟಿಯ ಹಿಂದೆ ಗೇರು ಮರದ ಕೊಂಬೆಗೆ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣಾ ಯು.ಡಿ.ಆರ್ ನಂಬ್ರ 45/2014 ಕಲಂ: 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಪಘಾತ ಪ್ರಕರಣ
- ಬ್ರಹ್ಮಾವರ : ದಿನಾಂಕ 30/08/2014 ರಂದು 15:15 ಗಂಟೆಗೆ ಉಡುಪಿ ತಾಲುಕು ಚಾಂತಾರು ಗ್ರಾಮದ ಮಹಾಲಿಂಗೇಶ್ವರ ದೇವಸ್ತಾನದ ಬಳಿ ಆರೊಪಿ ದೀಕ್ಷಾ ತನ್ನ ಬಾಬ್ತು ಹೊಂಡಾ ಆಕ್ಟಿವ್ KA 20 EF 9560 ನೇ ಮೊಟಾರು ಸೈಕಲನ್ನು ಮಟಪಾಡಿ ಕಡೆಯಿಂದ ಬ್ರಹ್ಮಾವರ ಕಡೆಗೆ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಮೊಟಾರು ಸೈಕಲಿನ ಸಹ ಸವಾರರಾದ ಜಯಂತಿ ರವರು ರಸ್ತೆಗೆ ಬಿದ್ದ ಪರಿಣಾಮ ತಲೆಯ ಹಿಂಭಾಗ ತೀವ್ರ ತರದ ಗಾಯವಾಗಿರುತ್ತದೆ ಎಂಬುದಾಗಿ ಶಿವರಾಜ್ ಕುಮಾರ್, ನೀಲಾವರ ಗ್ರಾಮ ಇವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 161/2014 ಕಲಂ 279.338 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಶಂಕರನಾರಾಯಣ : ದಿನಾಂಕ 01-09-2014 ರಂದು 15:45 ಗಂಟೆಗೆ ಕುಂದಾಫುರ ತಾಲೂಕು ಸಿದ್ದಾಪುರ ಗ್ರಾಮದ ಜಡ್ಡಿನಬೈಲ್ಎಂಬಲ್ಲಿ ಆರೋಪಿ ರಾಜೀವ ಶೆಟ್ಟಿ ತನ್ನ ಬಾಬ್ತು KA 20 Y 4782 ನೇ ನಂಬ್ರದ ಮೋಟಾರು ಸೈಕಲ್ನ್ನು ಸಿದ್ದಾಪುರ ಕಡೆಯಿಂದ ಅಮಾಸೆಬೈಲ್ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬರುತ್ತಿದ್ದವನು ಏಕಾಏಕಿಯಾಗಿ ಬೈಕ್ನ ನಿಯಂತ್ರಣ ತಪ್ಪಿ ಆತನ ತೀರ ಬಲ ಬದಿಗೆ ಬಂದು ರಸ್ತೆಯಲ್ಲಿ ಬೈಕ್ಸಮೇತ ಬಿದ್ದು ಹಾಗೇ ಬಿದ್ದ ರಭಸದಲ್ಲಿ ಸುಮಾರು 15 ಅಡಿಯಷ್ಟು ದೂರ ಜಾರಿಕೊಂಡು ಬಂದು ಅಮಾಸೆಬೈಲ್ ಕಡೆಯಿಂದ ಸಿದ್ದಾಪುರ ಕಡೆಗೆ ಬರುತ್ತಿದ್ದ KA 20 G 375 ನೇ ನಂಬ್ರದ ಪೊಲೀಸ್ ಇಲಾಖೆಯ ಜೀಪಿಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ಬೈಕ್, ಜೀಪು ಜಖಂಗೊಂಡು ಆರೋಪಿ ಗಾಯಗೊಂಡಿರುತ್ತಾನೆ ಎಂಬುದಾಗಿ ಸುನಿಲ್ ಕುಮಾರ್ ಎಮ್ ಎಸ್. ಪೊಲೀಸ್ ಉಪನಿರೀಕ್ಷಕರು ಅಮಾಸೆಬೈಲ್ ಪೊಲೀಸ್ ಠಾಣೆ ಇವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 131/14 ಕಲಂ: 279 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಟ್ಕಾ ಜುಗಾರಿ ಪ್ರಕರಣ
- ಕಾಪು : ದಿನಾಂಕ 01.09.2014 ರಂದು ಕಾಪು ವೃತ್ತ ನಿರೀಕ್ಷಕರು ಉಚ್ಚಿಲ ಸಾರ್ವಜನಿಕ ಗಣೇಶೊತ್ಸವ ವಿಸರ್ಜನಾ ಮೆರವಣೆಗೆ ಬಂದೊಬಸ್ತು ಕರ್ತವ್ಯದಲ್ಲಿದ್ದಾಗ ಯೇಣಗುಡ್ಡೆ ಗ್ರಾಮದ ಕಟಪಾಡಿ ಮೀನು ಮಾರ್ಕೆಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಇಲಾಖಾ ಜೀಪಿನಲ್ಲಿ ಸಿಬ್ಬಂದಿಯವರೊಂದಿಗೆ ಸದ್ರಿ ಸ್ಥಳಕ್ಕೆ 19.45 ಗಂಟೆಗೆ ಬಂದು ದಾಳಿ ನಡೆಸಿ ಆರೋಪಿ 1)ರವಿ @ ರವಿ ಪೂಜಾರಿ ತಂದೆ: ಶೇಖರ ಪೂಜಾರಿ ವಾಸ : ಕುಚ್ಚಿಕೊಡು ಕೋಟೆ ಗ್ರಾಮ 2) ಶ್ರೀಶೈಲ @ ಶೈಲೇಶ್ ತಂದೆ:ಬಸಪ್ಪ ವಾಸ:ಅಗ್ರಹಾರ ಮಣಿಪುರ ರಸ್ತೆ ಕಟಪಾಡಿ ಇವರುಗಳನ್ನು ಹಾಗೂ ಸಾರ್ವಜನಿಕರಿಂದ ಮಟ್ಕಾದ ಬಗ್ಗೆ ಸಂಗ್ರಹಿಸಿದ ಹಣ ರೂ 3,340/- ಹಾಗೂ ಮಟ್ಕಾಚೀಟಿ, ಬಾಲ್ ಪೆನ್ ,2 ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿದೆ ಈ ಬಗ್ಗೆ ಸುನೀಲ್ ವೈ ನಾಯಕ್ ವೃತ್ತ ನಿರೀಕ್ಷಕರು ಕಾಪು ವೃತ್ತ ಇವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 175/14 ಕಲಂ 78(1) &(3) ಕೆ.ಪಿ ಕಾಯಿದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಮಲ್ಪೆ : ದಿನಾಂಕ 01.09.2014 ರಂದು ರವಿಕುಮಾರ ಎ, ಪಿ.ಎಸ್.ಐ ಮಲ್ಪೆ ಠಾಣೆಯವರು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ನಲ್ಲಿರುವಾಗ ದೊರೆತ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ 20.15 ಗಂಟೆ ಸಮಯಕ್ಕೆ ದಾಳಿ ನಡೆಸಿ ಕೊಡವೂರು ಗ್ರಾಮ ಎಂ.ಡಿ. ಬಾರ್ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಆಕ್ರಮವಾಗಿ ಕಾನೂನು ಬಾಹಿರವಾಗಿ ಹಣ ವನ್ನು ಪಣವನ್ನಾಗಿಟ್ಟುಕೊಂಡು ಇಸ್ಪೀಟ್ ಜುಗಾರಿ ಆಟ ಆಡುತ್ತಿರುವ ಆರೋಪಿಗಳಾದ 1) ಸೂರಾಜ್ (28) ತಂದೆ ಈಶ್ವರ ಮೊಗೇರ 2) ಹರೀಶ್ (30) ತಂದೆ ರಮೇಶ ಸುವರ್ಣ ಗ್ರಾಮ. 3) ಕಿರಣ್ (26) ತಂದೆ ಸೋಮನಾಥ 4) ಉದಯ (32) ತಂದೆ ಮಂಜುನಾಥ ಸುವರ್ಣ 5) ಕುಮಾರ್ (32) ತಂದೆ ಸಂಜೀವ ಕೋಟ್ಯಾನ್ 6) ಚಂದ್ರಹಾಸ್ (42) ತಂದೆ ಎಸ್.ಬಿ ಮೆಂಡನ್ ಎಂಬವರನ್ನು ಬಂದಿಸಿ, ನಗದು ಒಟ್ಟು ರೂ 3,710/-, 52 ಇಸ್ಪೀಟ್ ಎಲೆಗಳು, ಜುಗಾರಿ ಆಡಲು ಉಪಯೋಗಿಸಿದ ಉದಯವಾಣಿ ದಿನ ಪತ್ರಿಕೆಯನ್ನು ಪಂಚರ ಸಮಕ್ಷಮದಲ್ಲಿ ಮಹಜರ್ ಮುಖೇನ ಸ್ವಾಧೀನ ಪಡಿಸಿಕೊಂಡು ಠಾಣೆಗೆ ಬಂದು ಅಪರಾಧ ಕ್ರಮಾಂಕ : 124/2014 ಕಲಂ 87 ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿರುವುದಾಗಿದೆ.
ಇತರ ಪ್ರಕರಣ
- ಉಡುಪಿ ನಗರ : ದಿನಾಂಕ 10/04/2014 ರಂದು ಪಿರ್ಯಾದಿ ಮುನೀರ್ ಅಹ್ಮದ್ [62] ತಂದೆ: ದಿ ಅಬ್ದುಲ್ ಲತೀಫ್ ಸಾಹೇಬ್, ವಾಸ: ಸನ ಮಂಜಿಲ್ ಪಾಟ್ನ ತೋಟ, ಮಠದ ಬೆಟ್ಟು ಉದ್ಯಾವರ ಉಡುಪಿ ರವರಿಗೆ ಸುಧೀರ್ ಎಂಬುವರು ಫೋನ್ ಮಾಡಿ ನೀವು ಪೊಲೀಸ್ ಠಾಣೆಗೆ ಬರಬೇಕು ಎಂದು ಹೇಳಿದಾಗ ಮುನೀರ್ ಅಹ್ಮದ್ ಅವರ ತಂಗಿಯ ಮಗನಾದ ಶಮೀಲ್ ಎಂಬುವರೊಂದಿಗೆ ಆರೋಪಿತ ಸುಧೀರ್ ರವರನ್ನು ಬೇಟಿ ಮಾಡಿದಾಗ ಅವರು ನಿಮ್ಮ ಮಗಳ ನಗ್ನ ಫೋಟೋಗಳನ್ನು ಇಂಟರ್ ನೆಟ್ ಹಾಗೂ ಮಾಧ್ಯಮಗಳಲ್ಲಿ ಹಾಕುತ್ತೇನೆ ಮತ್ತು ನಗ್ನ ಫೋಟೋಗಳು ಬೆಂಗಳೂರು ದೆಹಲಿಯ ಪೊಲೀಸರ ಬಳಿಯಲ್ಲಿದ್ದು ಸದ್ರಿ ಫೊಟೋಗಳನ್ನು ನಿಲ್ಲಿಸಬೇಕಾದರೆ 30 ಲಕ್ಷ ರೂಪಾಯಿ ನೀಡುವಂತೆ ಕೇಳಿರುತ್ತಾರೆ ಪಿರ್ಯಾದಿ ಮುನೀರ್ ಅಹ್ಮದ್ ರು ಹಣವಿಲ್ಲ ಎಂದು ಹೇಳಿದಾಗ ಆರೋಪಿತರು ಯಾರಿಗೋ ಫೊನ್ ಮಾಡಿ ತದನಂತರ 25 ಲಕ್ಷ ನೀಡಬೇಕಾಗಿ ಹೇಳಿದ್ದು ದಿನಾಂಕ 11/04/2014 ರದು 2 ಲಕ್ಷವನ್ನು ಮತ್ತು ದಿನಾಂಕ 19/04/2014 ರಂದು ಸಂಜೆ 5:00 ಗಂಟೆಗೆ ಭುಜಂಗ ಪಾರ್ಕ್ ಬಳಿ 23 ಲಕ್ಷ ನೀಡಿರುತ್ತಾರೆ. ಈ ಸಮಯ ಆರೋಪಿಗಳಾದ ಶಮೀಲ್ ಮತ್ತು ಸುಧೀರ್ ರವರು ಹಣ ಪಡೆದುಕೊಂಡು ಹೋಗಿರುತ್ತಾರೆ. ನಂತರ ಮುನೀರ್ ಅಹ್ಮದ್ ರವರು ಈ ಬಗ್ಗೆ ಪೊಲೀಸರಿಗೆ ಮತ್ತು ಮಾಧ್ಯಮದವರಿಗೆ ತಿಳಿಸುವುದಾಗಿ ಹೇಳಿದಾಗ ಆರೋಪಿತ ಶಮೀಲ್ ದೂರು ನೀಡದಿದ್ದರೆ ಹಣ ವಾಪಾಸು ನೀಡುವುದಾಗಿ ಹೇಳಿ ದಿನಾಂಕ 21/08/2014 ರಂದು ಪಿರ್ಯಾದಿದಾರರಿಗೆ ಹಣ ವಾಪಾಸ್ಸು ನೀಡಿರುತ್ತಾರೆ ಎಂಬುದಾಗಿ ಮುನೀರ್ ಅಹ್ಮದ್ ಇವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 268 /2014 ಕಲಂ 384,34 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment