ಅಪಘಾತ ಪ್ರಕರಣಗಳು
- ಬ್ರಹ್ಮಾವರ: ದಿನಾಂಕ 03/03/2014 ರಂದು 15:45 ಗಂಟೆಗೆ ಪಿರ್ಯಾದಿದಾರರಾದ ಸಿ ಗಣೇಶ ಹೆಬ್ಬಾರ್ ತಂದೆ ನರಸಿಂಹ ಹೆಬ್ಬಾರ್ ವಾಸ ದೇವು ಬೈಲು, ಚಾಂತಾರು ಗ್ರಾಮ ಎಂಬವರ ಸಂಬಂಧಿ ಸಂತೋಷ ಎಂಬವರು ತನ್ನ ಮೋಟಾರು ಸೈಕಲ್ ನಂಬ್ರ ಕೆಎ-20 ಎಕ್ಷ್-8860 ರಲ್ಲಿ ಸಾಲ್ಮರ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಾ ಕೆ.ಜಿ ರೋಡ್ ಬಸ್ ಸ್ಟಾಂಡ್ ಬಳಿ ತಲುಪುವಾಗ ಕುಂದಾಪುರ ಕಡೆಯಿಂದ ಕೆಎ-25ಪಿ-1089 ನೇ ಇಂಡಿಗೋ ಕಾರು ಚಾಲಕ ದಿನೇಶ್ ಎಂಬವರು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಅತೀ ವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ಸಂತೋಷ್ ರವರ ಮೋಟಾರು ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ ಸಂತೋಷ್ ರವರಿಗೆ ಬಲ ಕಾಲಿಗೆ ಮತ್ತು ತಲೆಗೆ ಗಾಯವಾಗಿದ್ದು, ವಾಹನಗಳು ಜಖಂ ಗೊಂಡಿರುತ್ತವೆ ಎಂಬುದಾಗಿ ಸಿ ಗಣೇಶ ಹೆಬ್ಬಾರ್ ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 57/2014 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿದೆ.
- ಬ್ರಹ್ಮಾವರ: ದಿನಾಂಕ 04/03/2014 ರಂದು 08:30 ಗಂಟೆಗೆ ಉಡುಪಿ ತಾಲೂಕು ಉಪ್ಪೂರು ಗ್ರಾಮದ ಸಾಲ್ಮರ ದುರ್ಗಾಪರಮೇಶ್ವರಿ ದೇವಸ್ತಾನದ ಬಳಿ ಪೆರ್ಡೂರು ಕೆ.ಜಿ ರೋಡ್ ರಸ್ತೆಯಲ್ಲಿ ಸೈಕಲ್ ನಲ್ಲಿ ಕೆ.ಜಿ ರೋಡ್ ಕಡೆಗೆ ಹೋಗುತ್ತಿದ್ದ ಪಿರ್ಯಾದಿದಾರರಾದ ಅಶೋಕ ಕುಮಾರ್ (40) ತಂದೆ ದಿ ಗಿರಿಯ ಪೂಜಾರಿ ವಾಸ ಸಾಲ್ಮರ ಉಪ್ಪೂರು ಗ್ರಾಮ ಎಂಬವರ ಮಗಳು ಸಂಜನಾ ಹಾಗೂ ಸೈಕಲ್ ನಲ್ಲಿ ಹಿಂದುಗಡೆ ಕುಳಿತಿದ್ದ ಮಗ ಹಿತೇಶನಿಗೆ ಕೊಳಲಗಿರಿ ಕಡೆಯಿಂದ ಕೆ.ಜಿ ರೋಡ್ ಕಡೆಗೆ ಕೆಎ-20ಬಿ-8106 ನೇ ಲಾರಿ ಚಾಲಕನಾದ ರಿಚರ್ಡ ಡಿಸೋಜಾ ಎಂಬವರು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ ಸೈಕಲ್ ನಲ್ಲಿ ಹಿಂದುಗಡೆ ಕುಳಿತಿದ್ದ ಹಿತೇಶ (12) ನಿಗೆ ಗಾಯವಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂಬುದಾಗಿ ಅಶೋಕ ಕುಮಾರ್ ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 58/2014 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment