Tuesday, March 04, 2014

Daily Crime Reported on 04/03/2014 at 19:30 Hrs.



ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 04/03/2014 ರಂದು ಬೆಳಿಗ್ಗೆ 09:00 ಗಂಟೆಗೆ ಕುಂದಾಪುರ ತಾಲೂಕಿನ ಕೋಣಿ ಗ್ರಾಮದ ಮುಡ್ಲಕಟ್ಟೆ ರೈಲ್ವೆ ಬ್ರೀಜ್ಜ್ ಹತ್ತಿರ ರಸ್ತೆಯಲ್ಲಿ ಆಪಾದಿತ ಉಮೇಶ್ ದೇವಾಡಿಗ ಎಂಬವರು ಕೆಎ 20 ಇಎ 9371 ನೇಯ ಮೋಟರ್ ಸೈಕಲ್ ನಲ್ಲಿ ಪಿರ್ಯಾದಿದಾರರಾದ ರಕ್ಷಿತ್ (21) ತಂದೆ ರಾಧಾಕೃಷ್ಣ ವಾಸ ಚೌಕಿ ಹೌಸ್, ಕಂಚಗೋಡು, ಗುಜ್ಜಾಡಿ ಗ್ರಾಮ, ಕುಂದಾಪುರ ತಾಲೂಕು ಎಂಬವರನ್ನು ಸಹ ಸವಾರನ್ನಾಗಿ ಕುಳ್ಳಿರಿಸಿಕೊಂಡು ಕಂಚುಗೋಡುನಿಂದ ಮುಡ್ಲಕಟ್ಟೆ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಯಾವುದೇ ಸೂಚನೆ ನೀಡದೆ ರಸ್ತೆಯ ಬಲಕ್ಕೆ ಸವಾರಿ ಮಾಡಿದಾಗ ನೊಂದಣಿ ನಂಬ್ರ ತಿಳಿಯದ ಬೈಕ್ ಸವಾರ ಬಸ್ರೂರು ಕಡೆಯಿಂದ ಕುಂದಾಪುರ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ವಾಹನ ಸವಾರರು ವಾಹನಗಳ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಬಲಕಾಲಿನ ಪಾದದ ಮೇಲ್ಬಾಗ ಹಾಗೂ ಪಾದದ ಮಣಿಗಂಟಿಗೆ ರಕ್ತಗಾಯವಾಗಿ ಕುಂದಾಪುರದ ವಿನಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ ಎಂಬುದಾಗಿ ರಕ್ಷಿತ್ ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 37/2014 ಕಲಂ 279, 337 ಐ.ಪಿ.ಸಿ ಮತ್ತು 134 (ಎ) (ಬಿ) ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: