ಅಪಘಾತ ಪ್ರಕರಣ
- ಉಡುಪಿ ನಗರ:ಪಿರ್ಯಾದಿದಾರರಾದ ಆಶಿತ್ ಎ ಕೋಟ್ಯಾನ್ (21) ತಂದೆ:ದಿವಂಗತ ಅಶೋಕ್ ಕೋಟ್ಯಾನ್ ವಾಸ:ವಾಣಿಶ್ರೀ ಮನೆ ಬಡಾನಿಡಿಯೂರು ಪೋಸ್ಟ್ ಮತ್ತು ಗ್ರಾಮ, ಕದಿಕೆ ಉಡುಪಿ ಜಿಲ್ಲೆರವರು ಈ ದಿನ ದಿನಾಂಕ 26/05/2013 ರಂದು ತನ್ನ ಬೈಕ್ ನಂಬ್ರ ಕೆಎ 20 ವಿ 7271 ನೇದರಲ್ಲಿ ಮನೆಯಿಂದ ಹೊರಟು ಉಡುಪಿಯಲ್ಲಿ ಸ್ನೇಹಿತನನ್ನು ಭೇಟಿ ಮಾಡುವರೇ ಸವಾರಿ ಮಾಡಿಕೊಂಡು ಬರುತ್ತಾ 11:30 ಗಂಟೆಗೆ ಮಲ್ಪೆ ರಸ್ತೆಯಿಂದ ಕರಾವಳಿ ಜಂಕ್ಷನ್ ಕಡೆಗೆ ಹೋಗುತ್ತಿದ್ದಾಗ ಕರಾವಳಿ ಬೈಪಾಸ್ ಬಳಿಯಲ್ಲಿನ ಸನ್ ಶೈನ್ ಹೋಟೇಲಿನ ಕಡೆಯಿಂದ ಕೆಎ 20 ಎನ್ 4483 ಸ್ವಿಪ್ಟ್ ಕಾರು ಚಾಲಕನು ತನ್ನ ಕಾರನ್ನು ಅತೀ ವೇಗ ಹಾಗೂ ಆಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಆಶಿತ್ ಎ ಕೋಟ್ಯಾನ್ರವರ ಬೈಕಿಗೆ ಬಲ ಭಾಗದಿಂದ ಢಿಕ್ಕಿ ಹೊಡೆದ ಪರಿಣಾಮ ಆಶಿತ್ ಎ ಕೋಟ್ಯಾನ್ರವರು ರಸ್ತೆಗೆ ಬಿದ್ದು ಬಲಕಾಲಿನ ಕೋಲು ಕಾಲಿನ ಮೂಳೆ ಮುರಿತವಾಗಿದ್ದು ಬಲ ಕೈ ಮೊಣಗಂಟಿಗೆ ತರಚಿದ ಗಾಯವಾಗಿರುತ್ತದೆ. ನಂತರ ಆಶಿತ್ ಎ ಕೋಟ್ಯಾನ್ರವರನ್ನು ಚಿಕಿತ್ಸೆಯ ಬಗ್ಗೆ ಉಡುಪಿಯ ಸಿಟಿ ಆಸ್ಪತ್ರೆಗೆ ದಾಖಲು ಮಾಡಿದ್ದಾಗಿದೆ. ಈ ಅಪಘಾತದಿಂದ ಬೈಕ್ ಹಾಗೂ ಕಾರಿನ ಎಡಭಾಗ ಜಖಂಗೊಂಡಿರುತ್ತದೆ. ಈ ಬಗ್ಗೆ ಆಶಿತ್ ಎ ಕೋಟ್ಯಾನ್ರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 256/2013 ಕಲಂ:279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಬ್ರಹ್ಮಾವರ:ದಿನಾಂಕ:25/05/2013 ರಂದು ರಾತ್ರಿ 08:40 ಗಂಟೆಗೆ ಕಚ್ಚೂರು ಗ್ರಾಮದ ಹುರುಳಿಜೆಡ್ಡು ಎಂಬಲ್ಲಿ ಪಿರ್ಯಾದಿದಾರರಾದ ಶಂಕರ ಪೂಜಾರಿ (29) ತಂದೆ:ದಿವಂಗತ ಐತ ಪೂಜಾರಿ ವಾಸ:ಗಾಯತ್ರಿ ನಿಲಯ, ಕಾಳಿಕಾಂಬ ದೇವಸ್ಥಾನದ ಹತ್ತಿರ, ಬಾರ್ಕೂರು ಅಂಚೆ, ಕಚ್ಚೂರು ಗ್ರಾಮರವರು ಬಾರ್ಕೂರು ಕಡೆಯಿಂದ ಕಚ್ಚೂರು ಕಡೆಗೆ ನಡೆದುಕೊಂಡು ಹೋಗುವಾಗ ಆರೋಪಿಗಳಾದ ಸರ್ವೋತ್ತಮ ಪೂಜಾರಿ ಹಾಗೂ ಗೋಪಾಲ ಪೂಜಾರಿ ಇವರುಗಳು ಶಂಕರ ಪೂಜಾರಿರವರನ್ನು ತಡೆದು ನಿಲ್ಲಿಸಿ ಕೈಯಿಂದ ಹೊಡೆದು ಕಾಲಿನಿಂದ ತುಳಿದು ಆರೋಪಿ ಸರ್ವೋತ್ತಮ ಪೂಜಾರಿ ಚೂರಿಯಿಂದ ತಿವಿಯಲು ಬಂದಾಗ ಶಂಕರ ಪೂಜಾರಿರವರು ಪ್ರತಿಭಟಿಸಿದಾಗ ಕೈಗೆ ತರಚಿದ ಗಾಯವಾಗಿರುತ್ತದೆ. ಶಂಕರ ಪೂಜಾರಿ ಹಾಗೂ ಆರೋಪಿಗಳಿಗೆ ಜಮೀನಿನ ಪಾಲಿನ ವಿಷಯದಲ್ಲಿ ದ್ವೇಷವಿದ್ದು ಈ ತಕ್ಷೀರು ಮಾಡಿದ್ದಾಗಿದೆ. ಈ ಬಗ್ಗೆ ಶಂಕರ ಪೂಜಾರಿರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 185/2013 ಕಲಂ:341,323,324 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಹೆಬ್ರಿ:ದಿನಾಂಕ:25/05/2013 ರಂದು ಬೆಳಿಗ್ಗೆ 08:00 ಗಂಟೆಗೆ ಪಿರ್ಯಾದಿದಾರರಾದ ಕರಿಯ ನಾಯ್ಕ (50) ತಂದೆ:ದಿವಂಗತ ಸೋಮ ನಾಯ್ಕ ವಾಸ:ಕೊಂಡಿಜೆಡ್ಡು, ಚಾರಾ ಗ್ರಾಮ, ಕಾರ್ಕಳರವರ ಮಗಳು ಪ್ರತೀಮಾ ನಾಯ್ಕ (18) ಎಂಬವರು ತನ್ನ ಮನೆಯಾದ ಕಾರ್ಕಳ ತಾಲೂಕು ಚಾರಾ ಗ್ರಾಮದ ಕೊಂಡೆಜಡ್ಡು ಎಂಬಲ್ಲಿಂದ ಹೆಬ್ರಿ ಪೇಟೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಈ ತನಕ ವಾಪಾಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಕರಿಯ ನಾಯ್ಕರವರು ನೀಡಿದ ದೂರಿನಂತೆ ಹೆಬ್ರಿ ಠಾಣಾ ಅಪರಾಧ ಕ್ರಮಾಂಕ 37/2013 ಕಲಂ ಹುಡುಗಿ ಕಾಣೆ ಎಂಬುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment