ಅಪಘಾತ
ಪ್ರಕರಣ
- ಕಾರ್ಕಳ: ದಿನಾಂಕ: 27/08/2015 ರಂದು 20:00 ಗಂಟೆಗೆ ಪಿರ್ಯಾಧಿ ಪ್ರಸಾದ್ ಜೋಗಿ ಇವರು ತನ್ನ ಸ್ನೇಹಿತ ವಿಶ್ವನಾಥ ಎಂಬವರೊಂದಿಗೆ ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ KA 20 EH 2802 ನೇಯದರಲ್ಲಿ ಸಹಸವಾರರಾಗಿ ಬಜಗೋಳಿ ಕಡೆಯಿಂದ ಕಾರ್ಕಳಕ್ಕೆ ಬರುತ್ತಾ ಮೋಟಾರ್ ಸೈಕಲ್ ನಂಬ್ರ KA 20 EH 2802 ನೇಯದನ್ನು ವಿಶ್ವನಾಥನು ಅತೀವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಕಾರ್ಕಳ ತಾಲೂಕು ಕಸಬಾ ಗ್ರಾಮದ ಕಾಳಿಕಾಂಬ ದೇವಸ್ಥಾನದ ಬಳಿ ತಲುಪುವಾಗ್ಗೆ ಹಠಾತ್ತನೆ ಬೀದಿ ನಾಯಿಯೊಂದು ರಸ್ತೆಯಲ್ಲಿ ಅಡ್ಡ ಬಂದಾಗ ನಾಯಿಯನ್ನು ತಪ್ಪಿಸಲು ಒಮ್ಮೇಲೆ ಮೋಟಾರ್ ಸೈಕಲ್ ನ್ನು ಎಡಕ್ಕೆ ಚಲಾಯಿಸಿ ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದನು. ಪರಿಣಾಮವಾಗಿ ಪಿರ್ಯಾಧಿ ಮತ್ತು ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾಧಿದಾರರ ಎಡತೊಡೆಯ ಮೂಳೆ ಜಖಂಗೊಂಡಿದ್ದು ಚಿಕಿತ್ಸೆ ಬಗ್ಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗಿದೆ. ಈ ಬಗ್ಗೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 30/15 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಳವು
ಪ್ರಕರಣ
- ಮಣಿಪಾಲ: ದಿನಾಂಕ 27.03.15ರಂದು ಸಂಜೆ 6:00ಗಂಟೆಯಿಂದ ದಿನಾಂಕ 28.03.15ರಂದು ಬೆಳಿಗ್ಗೆ 08:00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಪಿರ್ಯಾದಿ ಗೋವಿಂದ ಪ್ರಭು ಇವರ ಮನೆಯ ಮುಂಭಾಗದ ಬಾಗಿಲಿನ ಬೀಗವನ್ನು ಬಲತ್ಕಾರವಾಗಿ ಮುರಿದು ಮನೆಯೊಳಗೆ ಪ್ರವೇಶಿಸಿ ಮನೆಯೊಳಗಿದ್ದ ಸೆಲ್ಪ್ ನ ಬೀಗವನ್ನು ಮುರಿದು ಸೆಲ್ಪ್ನಲ್ಲಿದ್ದ ಆಂದಾಜು 15ಗ್ರಾಂ ಬಂಗಾರದಲ್ಲಿ ಕಟ್ಟಿದ್ದ ರುದ್ರಾಕ್ಷಿ ಮಾಲೆ-1, ಅಂದಾಜು 6 ಗ್ರಾಂ ತೂಕದ ಚಿನ್ನದ ಉಂಗುರ-1, ನಗದು 2000/-, ದೇವರ ಕೋಣೆಯಲ್ಲಿದ್ದ ಸ್ಟೀಲ್ನ ಕಾಣಿಕೆ ಡಬ್ಬಿ-1 ಇದರಲ್ಲಿ ಈಜಿಪ್ತಿನ ನಾಣ್ಯಗಳಿದ್ದವು. ಈ ಬಗ್ಗೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 42/15 ಕಲಂ 457, 380 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment