Friday, April 18, 2014

Daily Crime Reports as on 18/04/2014 at 17:00 Hrs.



ಅಪಘಾತ ಪ್ರಕರಣ :

  • ಕುಂದಾಪುರ ಸಂಚಾರ : ದಿನಾಂಕ: 18/04/2014 ರಂದು ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ರಾ.ಹೆ 66 ರಲ್ಲಿ ಆರೋಪಿ ಅಬ್ದುಲ್ ಸಲೀಂ ಎಂಬಾತನು ತನ್ನ ಬಾಬ್ತು KA-20 P-2311 ನೇ ನಂಬ್ರದ ಇನ್ನೋವಾ ಕಾರನ್ನು ಚಲಾಯಿಸಿಕೊಂಡು ಬರುತ್ತಾ ಸಮಯ ಸುಮಾರು ಬೆಳಿಗ್ಗೆ 6:45 ಗಂಟೆಗೆ ಕುಂದಾಫುರ ತಾಲೂಕಿನ ವಡೇರ ಹೋಬಳಿ ಗ್ರಾಮದ ಬಸ್ರೂರು ಮೂರು ಕೈ ಜಂಕ್ಷನ್ ಬಳಿ ಅತೀ ವೇಗ  ಹಾಗೂ ಅಜಾಗರೂಕತೆಯಿಂದ  ಚಲಾಯಿಸಿ ಬಸ್ರೂರು ಮೂರು ಕೈ ಜಂಕ್ಷನ್ ಕಡೆಯಿಂದ ಕುಂದಾಪುರ ಕಡೆಗೆ ಹೆಲೆನ್ ಡಿ ಸೋಜಾ (46ವರ್ಷ) ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-20 EE-2502 ನಂಬ್ರದ ಟಿ.ವಿ.ಎಸ್ ವೇಗೊ ಸ್ಕೂಟರ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಹೆಲೆನ್ ಡಿ ಸೋಜಾ ರವರಿಗೆ ತಲೆ, ಭುಜ, ಕಾಲಿಗೆ ರಕ್ತ ಗಾಯವಾಗಿದ್ದು ಕುಂದಾಪುರದ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ ಎಂಬುದಾಗಿ ಹೆಚ್. ಕೃಷ್ಣಯ್ಯ ಶೆಟ್ಟಿ ಸಟ್ವಾಡಿ, ಕಂದಾವರ ಗ್ರಾಮ, ಕುಂದಾಪುರ ಇವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 57/2014 ಕಲಂ. 279,337 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ :

  • ಹಿರಿಯಡ್ಕ  : ನೇತ್ರ ಮೂಲ್ಯದಿ, ಪ್ರಾಯ 58 ವರ್ಷ, ಗಂಡ: ಅಪ್ಪು ಕುಲಾಲ್, ವಾಸ: ಕುತ್ತೂರು ಬೈಲು, ಪೆರ್ಡೂರು ಗ್ರಾಮ, ಉಡುಪಿ ತಾಲೂಕು ಇವರ ಮಗ ರಮೇಶ್ ಕುಲಾಲ್ ಪ್ರಾಯ 35 ವರ್ಷ ಎಂಬಾತನು ವಿಪರೀತ ಕುಡಿತದ ಚಟವುಳ್ಳವನಾಗಿದ್ದು, ಸುಮಾರು ಒಂದು ವರ್ಷದ ಹಿಂದೆ ತನ್ನ ಪತ್ನಿ ಮಾಲಿನಿ ಹಾಗೂ ತನ್ನ ಇಬ್ಬರು ಮಕ್ಕಳೊಂದಿಗೆ ಬೊಮ್ಮರಬೆಟ್ಟು ಗ್ರಾಮದ ಕೊಂಡಾಡಿಯಲ್ಲಿರುವ ಇವರ ಅಕ್ಕ ಸುಂದರಿ ಎಂಬವರ ಮನೆಯಲ್ಲಿ ವಾಸ್ತವ್ಯವಿದ್ದವನು ತನಗಿರುವ ಕುಡಿತದ ಚಟದಿಂದ ಖರ್ಚಿಗೆ ಹಣ ಸಾಕಾಗದೆ ಸಂಸಾರ ನಡೆಸಲು ಕಷ್ಠವಾಗುತ್ತದೆ ಎಂಬ ಬೇಸರದಿಂದ ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 16.4.2014 ರಂದು ಸಂಜೆ 5:30 ಗಂಟೆಯಿಂದ ದಿನಾಂಕ 18.4.2014 ರಂದು ಬೆಳಗ್ಗೆ 8:00 ಗಂಟೆಯ ಮಧ್ಯೆ ಮನೆಯಲ್ಲಿ ಯಾರೂ ಇಲ್ಲದೆ ಸಮಯ ಮನೆಯೊಳಗೆ ಜಂತಿಗೆ ಸೀರೆಯಿಂದ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಎಂಬುದಾಗಿ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣಾ ಯುಡಿಆರ್‌ಕ್ರಮಾಂಕ : 07/2014 ಕಲಂ. 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: