Tuesday, December 30, 2014

Daily Crime Reported As On 30/12/2014 At 17:00Hrs

ಹಲ್ಲೆ ಪ್ರಕರಣ

  • ಮಣಿಪಾಲ: ಪಿರ್ಯಾದುದಾರರಾದ ಶರಣ ಗೌಡ (29), ತಂದೆ ಭೀಮನ ಗೌಡ, ವಾಸ ಇಂದಿರಾ ನಗರ, 3ನೇ ಅಡ್ಡ ರಸ್ತೆ, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಹಾಗೂ ಆಪಾದಿತ ವಿಜಯ ಎಂಬವರಿಗೆ ಹಣದ ವಿಚಾರದಲ್ಲಿ ತಕರಾರು ಇದ್ದು, ಈ ಬಗ್ಗೆ ದಿನಾಂಕ 29.12.2014 ರಂದು ಬೆಳಿಗ್ಗೆ 8:45 ಗಂಟೆಗೆ ಆಪಾದಿತ ವಿಜಯನು ತನ್ನ ಶಿವಳ್ಳಿ ಗ್ರಾಮದ ಪೆರಂಪಳ್ಳಿಯ ಮನೆಯ ಹತ್ತಿರ ಕಬ್ಬಿಣದ ರಾಡಿನಿಂದ ಎಡಕಾಲು ಮತ್ತು ಬಲಕಾಲಿಗೆ ಹಾಗೂ ಎರಡೂ ಕೈಗಳಿಗೆ ಹಲ್ಲೆ ಮಾಡಿದ ಪರಿಣಾಮ ರಕ್ತಗಾಯವನ್ನುಂಟು ಮಾಡಿರುತ್ತಾರೆ. ಈ ಕೃತ್ಯಕ್ಕೆ ಪಿರ್ಯಾದುದಾರರರು ಆಪಾದಿತರ ವಿಜಯನಿಗೆ ಬಾಕಿ ಇರುವ ಹಣವನ್ನು ಕೊಡದೇ ಇರುವುದು ಕಾರಣವಾಗಿರುತ್ತದೆ ಎಂಬುದಾಗಿ ಶರಣ ಗೌಡ  ಇವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 13/2014 ಕಲಂ 324 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಅಜೆಕಾರು: ಪಿರ್ಯಾದಿದಾರರಾದ ಗೋವಿಂದ ಗೌಡ (18), ತಂದೆ ದಿ. ವೆಂಕಪ್ಪ ಗೌಡ ವಾಸ 5 ಸೆಂಟ್ಸ್ ಕೈರೋಳಿ ಮನೆ ಹೆರ್ಮುಂಡೆ ಗ್ರಾಮ ಕಾರ್ಕಳ ತಾಲೂಕು ಇವರ ತಂದೆ ವೆಂಕಪ್ಪ ಗೌಡ (65) ಇವರು ದಿನಾಂಕ 29/12/2014ರಂದು ರಾತ್ರಿ 10 ಗಂಟೆಗೆ ಎಂದಿನಂತೆ ಊಟ ಮಾಡಿ ಹೆರ್ಮುಂಡೆ ಗ್ರಾಮದ 5 ಸೆಂಟ್ಸ್ ನಲ್ಲಿರುವ ಕೈರೋಳಿ ಮನೆಯಲ್ಲಿ ಮಲಗಿದ್ದು ರಾತ್ರಿ ಸುಮಾರು ಒಂದು ಗಂಟೆಗೆ ತನ್ನ ಹೆಂಡತಿಯಲ್ಲಿ ಕುಡಿಯಲು ನೀರು ಕೇಳಿ ನೀರು ಕುಡಿದ ಬಳಿಕ ವೆಂಕಪ್ಪ ಗೌಡರಿಗೆ ಉಸಿರು ಕಟ್ಟಿದಂತೆ ಆಗಿ ಕೂಡಲೇ ಪಿರ್ಯಾದಿದಾರರು 108ಗೆ ಕರೆ  ಮಾಡಿ ಆಂಬುಲೆನ್ಸ್ ತರಿಸಿದಾಗ ವೆಂಕಪ್ಪ ಗೌಡರು ಮೃತ ಪಟ್ಟಿದ್ದು ಮೃತರು ಹೃದಯಾಘಾತದಿಂದ ಮೃತ ಪಟ್ಟಿರುತ್ತಾರೆ ಎಂಬುದಾಗಿ ಗೋವಿಂದ ಗೌಡ ಇವರು ನೀಡಿದ ದೂರಿನಂತೆ ಅಜೆಕಾರು ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 16/14 ಕಲಂ 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ. 

No comments: