ಮನುಷ್ಯ ಕಾಣೆ ಪ್ರಕರಣ
- ಕುಂದಾಪುರ: ಪಿರ್ಯಾದಿದಾರರಾದ ಶ್ರೀಮತಿ ವಿಮಲಾ ಇವರ ಗಂಡ ಉದಯ ಆಚಾರಿ (36) ತಂದೆ:ದಿ. ನಾರಾಯಣ ಆಚಾರಿ ಎಂಬವರು ದಿನಾಂಕ 15/04/2015 ರಂದು ಬೆಳಿಗ್ಗೆ 07:30 ಗಂಟೆಗೆ ಕುಂದಾಪುರ ತಾಲೂಕು ಬಳ್ಕೂರು ಗ್ರಾಮದ ಬಳ್ಕೂರು ಸಾಲಿಮನೆ ಎಂಬಲ್ಲಿ ಅವರು ವಾಸ್ತವ್ಯವಿರುವ ಮನೆಯಿಂದ ಬಟ್ಟೆಬರೆಗಳನ್ನು ಬ್ಯಾಗ್ನಲ್ಲಿ ತುಂಬಿಸಿಕೊಂಡು ಹೋದವರು ಈವರೆಗೆ ಮನೆಗೆ ವಾಪಾಸು ಬಾರದೆ ಕಾಣೆಯಾಗಿರುವುದಾಗಿದೆ.ಈ ಬಗ್ಗೆ ಕುಂದಾಪುರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 270/2015, ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment