ಇತರೇ ಪ್ರಕರಣ
- ಗಂಗೊಳ್ಳಿ: ಪಿರ್ಯಾದಿದಾರರಾದ ಲೆಸ್ಲಿ ರೆಬೆಲ್ಲೋ ತಂದೆ:ಮ್ಯಾಕ್ಷೀಮ್ ರೆಬೆಲ್ಲೋ ಸೇನಾಪುರ ಗ್ರಾಮ ಎಂಬವರು ವೃತ್ತಿಯಲ್ಲಿ ಕೃಷಿಕನಾಗಿದ್ದು, ಸೇನಾಪುರ ಗ್ರಾಮದಲ್ಲಿ ಸರ್ವೆ ನಂಬ್ರ:27/13ಬಿ ರಲ್ಲಿ 0.38 ಎಕ್ರೆ ಹಾಗೂ ಸರ್ವೆ ನಂಬ್ರ:22/2ಬಿ ರಲ್ಲಿ 0.28 ಹಾಗೂ ಸರ್ವೆ ನಂಬ್ರ:27/3ಎ2 ರಲ್ಲಿ 1.21 ಹಾಗೂ ಸರ್ವೆ ನಂಬ್ರ 27/15ಎ ರಲ್ಲಿ 0.13 ಎಕ್ರೆ ಜಾಗ ಕೃಷಿ ಭೂಮಿ ಹೊಂದಿರುತ್ತಾರೆ. ಕೃಷಿಯಲ್ಲಿ ಮತ್ತು ಉದ್ಯೋಗದಲ್ಲಿ ತೀವ್ರತರವಾದ ಹಣಕಾಸಿನ ಸಮಸ್ಸೆ ಉಂಟಾಗಿ ದಿನಾಂಕ 17/12/2013 ರಂದು ರೂ 5,00,000/- ಸಾಲವನ್ನು ಉಮೇಶ ಶೆಟ್ಟಿ ಎಂಬವರಿಂದ ಪಡೆದುಕೊಂಡಿರುತ್ತಾರೆ. ಸದ್ರಿ ಹಣವನ್ನು 3 ತಿಂಗಳ ಒಳಗಡೆ ಪಾವತಿಸುವುದಾಗಿ ಅವರೊಳಗಡೆ ಮಾತುಕತೆ ಆಗಿದ್ದು ಭದ್ರತೆಗೆ ಕರ್ನಾಟಕ ಬ್ಯಾಂಕ್ ಲಿ. ಕುಂದಾಪುರ ಶಾಖೆಯ 3 ಬ್ಲ್ಯಾಂಕ್ ಚೆಕ್ ಗಳನ್ನು ನೀಡಿರುತ್ತಾರೆ. ಲೆಸ್ಲಿ ರೆಬೆಲ್ಲೋ ರವರು ಸದ್ರಿ ಹಣವನ್ನು ಕ್ಲಪ್ತ ಸಮಯದಲ್ಲಿ ಪಾವತಿಸಲಾಗದೇ ಒಂದು ವರ್ಷದ ಕಾಲಾವಕಾಶ ಕೇಳಿ ಈ ಬಗ್ಗೆ ದಿನಾಂಕ 29/01/2014 ರಂದು ಸಾಲ ಮರುಪಾವತಿ ಕರಾರು ಪತ್ರವನ್ನು ಮಾಡಿಕೊಂಡಿರುತ್ತಾರೆ.ಸದ್ರಿ ಕರಾರುಪತ್ರದಿಂದ ಲೆಸ್ಲಿ ರೆಬೆಲ್ಲೋ ರವರ ಹೆಸರಿನಲ್ಲಿಯ ಜಾಗ ಅಕ್ಕಯ್ಯ @ ಅಕ್ಕತಾ ರವರ ಹೆಸರಿಗೆ ಬದಲಾವಣೆಯಾಗಿರುತ್ತದೆ, ಹೀಗಿರುತ್ತಾ ದಿನಾಂಕ 13/07/2015 ರಂದು ಸಂಜೆ 06.00 ಗಂಟೆಗೆ ಸೇನಾಪುರ ಗ್ರಾಮದ ಸೇನಾಪುರ ಎಂಬಲ್ಲಿರುವ ಲೆಸ್ಲಿ ರೆಬೆಲ್ಲೋರವರ ಮನೆಗೆ ಆಪಾದಿತ ಉಮೇಶ ಶೆಟ್ಟಿ ಯವರು ಶಶಿ, ವಿಶ್ವನಾಥ ಶೆಟ್ಟಿ ಹಾಗೂ ಇನ್ನೊಬ್ಬ ವ್ಯಕ್ತಿಯ ಜೊತೆಯಲ್ಲಿ ಓಮಿನಿ ವಾಹನದಲ್ಲಿ ಬಂದು ಲೆಸ್ಲಿ ರೆಬೆಲ್ಲೋ ರವರಿಗೆ ನೀನು ಈ ಮನೆಯನ್ನು ಒಂದು ವಾರದ ಒಳಗಡೆ ಖಾಲಿಮಾಡಬೇಕು ಇಲ್ಲವಾದಲ್ಲಿ ರೌಡಿಗಳ ಸಹಾಯದಿಂದ ಜೆ.ಸಿ.ಬಿ ಯನ್ನು ತಂದು ನಿನ್ನನ್ನು ಹಾಗೂ ನಿನ್ನ ಹೆಂಡತಿ ಮಕ್ಕಳನ್ನು ಬಲತ್ಕಾರಿಂದ ಮನೆಯಿಂದ ಹೊರಹಾಕಿ ಮನೆಯನ್ನು ದೂಡಿಹಾಕುತ್ತೇವೆ ಎಂದು ಜೀವ ಬೆದರಿಕೆಯನ್ನು ಹಾಕಿರುತ್ತಾರೆ ಹಾಗೂ ಉಮೇಶ ಶೆಟ್ಟಿ ಯವರು ‘ ನನ್ನಿಂದ ಪಡೆದುಕೊಂಡ ರೂ 5,00,000/- ಸಾಲವನ್ನು ನನಗೆ ರೂ 15,00,000/- ಬಡ್ಡಿ ಸೇರಿ ಒಟ್ಟಿಗೆ 20,00,000/- ರೂ ಹಣವನ್ನು ಒಂದು ವಾರದ ಒಳಗೆ ನೀಡಬೇಕು' ಎಂದು ಬೆದರಿಸಿರುತ್ತಾರೆ.ಈ ಬಗ್ಗೆ ಗಂಗೊಳ್ಳಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 99/2015 ಕಲಂ: 3, 4 Karnataka Prohibition of Charging Exorbitant Interest Act 2004 & ಕಲಂ: 38,39 Karnataka Money landers act 1961 & ಕಲಂ 506, 34 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment