Monday, July 13, 2015

Daily Crime Reports As On 13/07/2015 At 17:00 Hrs

ಅಸ್ವಾಭಾವಿಕ ಮರಣ ಪ್ರಕರಣ
  • ಕಾರ್ಕಳ: ಪಿರ್ಯಾದಿದಾರರಾದ ಸುಶೀಲ (50) ,ಕೋಂ ಚೆನ್ನಪ್ಪ, ಬೆಳ್ತಂಗಡಿ ತಾಲೂಕು ಧರ್ಮಸ್ಥಳ  ಗ್ರಾಮ ಅಂಚೆ ಕನ್ಯಾಡಿ ಇವರು ತನ್ನ ಗಂಡ ಚೆನ್ನಪ್ಪ ಎಂಬವರೊಂದಿಗೆ ಕನ್ಯಾಡಿಯಿಂದ ತನ್ನ ಮಗಳ ಮನೆಯಾದ  ಕಾರ್ಕಳ ತಾಲೂಕು ದುರ್ಗಾ ಗ್ರಾಮದ ಎದುರುಗುಡ್ಡೆ ಎಂಬಲ್ಲಿಗೆ ಬಂದಿದ್ದು, ಸುಶೀಲರವರ ಪತಿ ಚೆನ್ನಪ್ಪರವರು ದಿನಾಂಕ 11/07/2015 ರಂದು ಬೆಳಿಗ್ಗೆ 9:00 ಗಂಟೆಗೆ ಎದೆನೋವು ಎಂದು ಸಂಜೆ 6:30 ಗಂಟೆಗೆ ವೈದ್ಯರಲ್ಲಿ ಹೋಗಲು ಮನೆಯಿಂದ ನಡೆದುಕೊಂಡು ಬರುವಾಗ ಕಾರ್ಕಳ  ತಾಲೂಕು ದುರ್ಗಾ ಗ್ರಾಮದ ಮಸೀದಿ ಬಳಿ ಕುಸಿದು ಬಿದ್ದಿದ್ದು, ಚೆನ್ನಪ್ಪರವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಚೆನ್ನಪ್ಪರವರು  ಹೃದಯಾಘಾತದಿಂದ  ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣೆ ಯು.ಡಿ.ಆರ್ ಕ್ರಮಾಂಕ 16/2015 ಕಲಂ 174 ಸಿಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 
ಮಕ್ಕಳ ಅಪಹರಣ ಪ್ರಕರಣ 
  • ಮಣಿಪಾಲ: ದಿನಾಂಕ 12/07/2015 ರಂದು 04:30 ಗಂಟೆಗೆ ಉಡುಪಿ ತಾಲೂಕು ಹೆರ್ಗಾ ಗ್ರಾಮದ ಪರ್ಕಳ ಸಣ್ಣಕ್ಕಿ ಬೆಟ್ಟು ಎಂಬಲ್ಲಿಂದ ಪಿರ್ಯಾದಿದಾರರಾದ ಲಲಿತಾ ಗಂಡ: ಹನುಮಂತ, ವಾಸ: ಗೀಣಿಗೇರ ಗ್ರಾಮ, ಕೊಪ್ಪಳ ತಾಲೂಕು & ಜಿಲ್ಲೆ ಇವರ ಮಕ್ಕಳಾದ ಮೇಘಾಶ್ರೀ (13) ಮತ್ತು ನಾಗರಾಜ (9) ಎಂಬವರನ್ನು ಯಾರೋ ದುಷ್ಕರ್ಮಿಗಳು ಅಪಹರಿಸಿರುವುದಾಗಿದೆ.ಈ ಬಗ್ಗೆ ಮಣಿಪಾಲ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 139/2015 ಕಲಂ 363 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.



No comments: