ಜುಗಾರಿ ಪ್ರಕರಣ
- ಗಂಗೊಳ್ಳಿ:ದಿನಾಂಕ 05/07/2015 ರಂದು ಗಂಗೊಳ್ಳಿ ಪೊಲೀಸ್ ಠಾಣೆಯ ಠಾಣಾ ಹೆಚ್.ಸಿ ರಮಾನಂದ ಶೆಟ್ಟಿರವರು ಠಾಣೆಯಲ್ಲಿರುವಾಗ ತ್ರಾಸಿ ಗ್ರಾಮದ ಮಾತಾ ಐಸ್ ಪ್ಲ್ಯಾಂಟ್ ಬಳಿ ಇರುವ ಹಾಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ತಮ್ಮ ಸ್ವಂತ ಲಾಭಕ್ಕೋಸ್ಕರ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ 16:30 ಗಂಟೆಗೆ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ 1) ಉಪೇಂದ್ರ(48) ತಂದೆ:ದಿ.ನಾರಾಯಾಣ ವಾಸ:ಭಾರತ್ ನಗರ ಕೊಡಪಾಡಿ ಗುಜ್ಜಾಡಿ ಗ್ರಾಮ 2)ನಾಗೇಶ್ ಕುಮಾರ್(30) ತಂದೆ:ಜಿ ರಾಮ್ ವಾಸ: ಭಾರತ್ ನಗರ ಕೊಡಪಾಡಿ ಗುಜ್ಜಾಡಿ ಗ್ರಾಮ 3)ರವೀಂದ್ರ(32) ತಂದೆ: ಬಾಬು ಪೂಜಾರಿ ವಾಸ:ಭಾರತ್ ನಗರ ಕೊಡಪಾಡಿ ಗುಜ್ಜಾಡಿ ಗ್ರಾಮ 4) ದೇವದಾಸ(58) ತಂದೆ:ಕೊರಗ ಖಾರ್ವಿ ವಾಸ ಜನತಾ ಕಾಲೋನಿ ಕೊಡಪಾಡಿ ಗುಜ್ಜಾಡಿ ಗ್ರಾಮ 5) ಶ್ರೀನಿವಾಸ(60) ತಂದೆ:ನಾಗ ವಾಸ ಬೆಳಕು ಮನೆ ಪಡುಕೋಣೆ ನಾಡ ಗ್ರಾಮ ಎಂಬುವವರನ್ನು ವಶಕ್ಕೆ ಪಡೆದುಕೊಂಡು ಅವರು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟಕ್ಕೆ ಉಪಯೋಗಿಸಿದ ನಗದು ಹಣ 4200/-,ವಿವಿಧ ಜಾತಿಯ ಇಸ್ಪೀಟ್ ಎಲೆಗಳು 52 ಹಾಗೂ ಹಳೆಯ ದಿನ ಪತ್ರಿಕೆ ಹಾಳೆಯನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ.ಈ ಬಗ್ಗೆ ಗಂಗೊಳ್ಳಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 93/2015 ಕಲಂ 87 ಕರ್ನಾಟಕ ಪೊಲೀಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment