ಅಪಘಾತ ಪ್ರಕರಣ
- ಕುಂದಾಪುರ: ದಿನಾಂಕ 04/07/2015 ರಂದು ಮಧ್ಯಾಹ್ನ 12:10 ಗಂಟೆಗೆ ಕುಂದಾಪುರ ತಾಲೂಕು ಕೊಟೇಶ್ವರ ಗ್ರಾಮದ ಪ್ರೀತಮ್ ಬಾರ್ & ರೆಸ್ಟೋರೆಂಟ್ ಬಳಿ ಸುದರ್ಶನ್ ರವರ ಕಾಂಪ್ಲೆಕ್ಸ್ ಎದುರುಗಡೆಯ ರಸ್ತೆಯಲ್ಲಿ ಆಪಾದಿತ ನಾಗರಾಜ ಹೆಬ್ಬಾರ್ ಎಂಬವರು KA 20 J 4025ನೇ ಬೈಕನ್ನು ಹುಣ್ಸೆಮಕ್ಕಿ ಕಡೆಯಿಂದ ಕೊಟೇಶ್ವರ ಕಡೆಗೆ ಅತೀವೇಗ ಹಾಗೂ ಅಜಾಗರರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅದೇ ದಿಕ್ಕಿನಲ್ಲಿ ಪಿರ್ಯಾದಿದಾರರಾದ ಸತ್ಯನಾರಾಯಣ ರಾವ್ (46)ವಾಸ:ಪೊಲೀಸ್ ವಸತಿ ಗೃಹ ಕುಂದಾಪುರ ರವರು ಸವಾರಿ ಮಾಡಿಕೊಂಡು ಬಂದು ತಿರುಗಿಸುವ ಸಲುವಾಗಿ ನಿಲ್ಲಿಸಿಕೊಂಡಿದ್ದ KA 20 EE 9720 ಬೈಕಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸತ್ಯನಾರಾಯಣ ರಾವ್ ರವರು ಬೈಕ್ ಸಮೇತ ರಸ್ತೆಯಲ್ಲಿ ಬಿದ್ದು ಗಾಯಗೊಂಡು ಚಿಕಿತ್ಸೆ ಬಗ್ಗೆ ಕೊಟೇಶ್ವರ ಎನ್.ಆರ್ ಆಚಾರ್ಯ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 82/2015 ಕಲಂ:279, 337 ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment