ದಿನಾಂಕ 24/06/2015 ರಂದು ಪಿರ್ಯಾದಿದಾರರಾದ ವಾಸು ಮೈಂದನ್ ತಂದೆ: ನಾರಾಯಣ ಕುಂದರ್
ವಾಸ:ಪಡುತೋನ್ಸೆ ಬೇಂಗ್ರೆ, ಕೆಮ್ಮಣ್ಣು, ಪಡುತೋನ್ಸೆ ಗ್ರಾಮ ಎಂಬುವವರು ಠಾಣೆಗೆ ಬಂದು ನೀಡಿದ ದೂರಿನ
ಸಾರಾಂಶವೆನೆಂದರೆ, ದಿನಾಂಕ:24/06/2015
ರಂದು ಸಂಜೆ 17:00 ಗಂಟೆಗೆ ಪಿರ್ಯಾದಿದಾರರು ಮತ್ತು ಅವರ ಅಣ್ಣ ಕೃಷ್ಣ ಎಂಬುವವರೊಂದಿಗೆ ಪಡುತೋನ್ಸೆ
ಗ್ರಾಮದ ಸ್ವರ್ಣ ನದಿಯಲ್ಲಿ ಮೀನುಗಾರಿಕೆಗೆ ಎಂದು ತೆರಳಿದ್ದಾಗ ಪರಂಗಿ ಕುದ್ರು ದಡದಲ್ಲಿ ಯಾವುದೋ
ಒಂದು ಅಪರಿಚಿತ ಗಂಡಸಿನ ಶವವು ನೀರಿನಲ್ಲಿ ಕವುಚಿ ತೆಲುತ್ತಿದ್ದುದನ್ನು ಕಂಡು ಕೂಡಲೇ ತಮ್ಮ ನೆರೆಕೆರೆಯವರಿಗೆ
ದೂರವಾಣಿಯ ಮುಖೇನ ಸ್ಥಳಕ್ಕೆ ಬರುವಂತೆ ತಿಳಿಸಿ, ಸದ್ರಿ ಗಂಡಸಿನ ಶವವನ್ನು ಪರಂಗಿಕುದ್ರು ದಡದಿಂದ ಪೆರ್ಲಕಡಿ ದಡಕ್ಕೆ ತಂದಿದ್ದು
ಮೃತ ಅಪರಿಚಿತ ವ್ಯಕ್ತಿಯು ಸುಮಾರು 3 ದಿನಗಳ ಹಿಂದೆ ಯಾವುದೋ ಕಾರಣದಿಂದ ನೀರಿನಲ್ಲಿ ಬಿದ್ದು ಸತ್ತಿರುವುದಾಗಿದೆ, ಮೃತ ಅಪರಿಚಿತ ವ್ಯಕ್ತಿಯ ವಾರಸುದಾರರು ಯಾರು ಎಂಬುದು ತಿಳಿಯದೇ ಇದ್ದು
ವಾರಸುದಾರರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಎಂಬಿತ್ಯಾದಿಯಾಗಿದ್ದು,
ಸದ್ರಿ ಪಿರ್ಯಾದಿಯಂತೆ ಠಾಣಾ ಯುಡಿಆರ್ ನಂಬ್ರ 26/2015 ಕಲಂ:174(3)(iv) ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕ್ರಮ ಕೈಗೊಂಡಿರುವುದಾಗಿದೆ.
ಅಪರಿಚಿತ ಶವದ ಚಹರೆ ಈ
ಕೆಳಗಿನಂತಿದೆ
ಕಪ್ಪುಬಣ್ಣದ ತುಂಬು ತೋಳಿನ ಜೀನ್ಸ್ ಶರ್ಟ, ಹಳದಿ ಬಣ್ಣದ ಕಾಟನ್ ಜೀನ್ಸ್
ಪ್ಯಾಂಟ್ ಧರಿಸಿದ್ದು
ಕೈಯಲ್ಲಿ ಸ್ಟೀಲ್ ಚೈನ್ ನ ಕಪ್ಪು ಬಣ್ಣದ ವಾಚ್ ಮತ್ತು
ಕಪ್ಪು ಬಣ್ಣದ ಬೆಲ್ಟ್ ಧರಿಸಿರುತ್ತಾನೆ.ಹಾಗೂ ಬಲ ಕಾಲಿನ ಮದ್ಯದ ಮೂರು ಬೆರಳುಗಳು
ಇರುವುದಿಲ್ಲ.
ಅಂದಾಜು ಪ್ರಾಯ: 35 ವರ್ಷ, ಎತ್ತರ 5.6 ಅಡಿ.
ಈ ಮೇಲ್ಕಾಣಿಸಿದ ಚಹರೆಯುಳ್ಳ ವ್ಯೆಕ್ತಿಯ ಮೃತದೇಹದ ಬಗ್ಗೆ ಮಾಹಿತಿ ದೊರೆತಲ್ಲಿ ಮಲ್ಪೆ ಠಾಣಾ
ಪಿ.ಎಸ್.ಐ ದೂರವಾಣಿ 0820-2537999 ಅಥವಾ ಸಿಪಿಐ ಉಡುಪಿ ವೃತ್ತ ದೂರವಾಣಿ 0820-2520329 ಮುಖೇನ ಮಾಹಿತಿ ನೀಡುವರೇ ವಿನಂತಿಸಿ ಕೊಳ್ಳಲಾಗಿದೆ.
No comments:
Post a Comment