ಪತ್ರಿಕಾ
ಪ್ರಕಟಣೆ
ಸ್ಪರ್ಧಿಗಳು
ಹಾಗೂ ಕಾರ್ಯಕತರ ಅವಗಾಹನೆಗೆ
ಮಾನ್ಯ
ಜಿಲ್ಲಾ ದಂಡಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು, ಉಡುಪಿ
ಜಿಲ್ಲೆರವರು ಜಿಲ್ಲೆಯಲ್ಲಿ ದಿನಾಂಕ: 05/06/2015 ರಂದು ನಡೆಯುವ ಗ್ರಾಮ ಪಂಚಾಯತ್ ಚುನಾವಣಾ ಮತ
ಎಣಿಕೆ ಸಂಬಂಧ ದಿನಾಂಕ: 05/06/2015 ರ ಪೂರ್ವಾಹ್ನ 06:00 ಗಂಟೆಯಿಂದ ದಿನಾಂಕ: 06/06/2015 ರ
ಪೂರ್ವಾಹ್ನ 06:00 ಗಂಟೆ ವರೆಗೆ ಸಿಆರ್ಪಿಸಿ ಕಲಂ 144 ರ ಅನ್ವಯ ಉಡುಪಿ ಜಿಲ್ಲಾದ್ಯಂತ
ಪ್ರತಿಬಂಧಕಾಜ್ಞೆಯನ್ನು ಜ್ಯಾರಿ ಮಾಡಿರುತ್ತಾರೆ. ಈ ಪ್ರತಿಬಂಧಕಾಜ್ಞೆ ಜ್ಯಾರಿ ಇರುವ
ಸಂದರ್ಭದಲ್ಲಿ ಯಾವುದೇ ರೀತಿಯ ಸಾರ್ವಜನಿಕ ಮೆರವಣಿಗೆ,
ವಿಜಯೋತ್ಸವ, ಕರಾಳೋತ್ಸವ, ಪ್ರತಿಭಟನಾ ಮೆರವಣಿಗೆ ಹಾಗೂ ವಿಜಯೋತ್ಸವದ ಅಂಗವಾಗಿ ಸಾರ್ವಜನಿಕ ಸಭೆ-
ಸಮಾರಂಭವನ್ನು ಮಾಡುವುದನ್ನು ನಿಷೇಧಿಸಲಾಗಿರುತ್ತದೆ. ಸದ್ರಿ ನಿಷೇಧಾಜ್ಞೆಯು ಸರ್ಕಾರದಿಂದ ಅಥವಾ
ಸರ್ಕಾರದ ಆದೇಶದಂತೆ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ, ಸಭೆ,
ಸಮಾರಂಭಗಳಿಗೆ ಅನ್ವಯವಾಗುವುದಿಲ್ಲ.
ಸಾರ್ವಜನಿಕರ
ಅವಗಾಹನೆಗೆ
ಜಿಲ್ಲೆಯಲ್ಲಿ
ದಿನಾಂಕ: 05/06/2015 ರಂದು ನಡೆಯುವ ಗ್ರಾಮ ಪಂಚಾಯತ್ ಚುನಾವಣಾ ಮತ ಎಣಿಕೆ ಸಂಬಂಧ ದಿನಾಂಕ:
05/06/2015 ರ ಪೂರ್ವಾಹ್ನ 06:00 ಗಂಟೆಯಿಂದ ಮತ ಎಣಿಕೆ ಕಾರ್ಯ ಮುಗಿಯುವವರೆಗೂ ಮತ ಎಣಿಕೆ
ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿಯೊಳಗೆ ಮಾತ್ರ ಅನ್ವಯವಾಗುವಂತೆ ಸಂಬಂಧಪಟ್ಟ ತಾಲೂಕು
ದಂಡಾಂಧಿಕಾರಿಗಳು ಅಧಿಕಾರವನ್ನು ಚಲಾಯಿಸಿ ಸಿಆರ್ಪಿಸಿ ಕಲಂ 144 ರ ಅನ್ವಯ ಪ್ರತಿಬಂಧಕಾಜ್ಞೆಯನ್ನು
ಜ್ಯಾರಿ ಮಾಡಿ ಆದೇಶವನ್ನು ಹೊರಡಿಸಲು ಮಾನ್ಯ ಜಿಲ್ಲಾ ದಂಡಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು, ಉಡುಪಿ ಜಿಲ್ಲೆರವರು
ಕುಂದಾಪುರ, ಉಡುಪಿ ಹಾಗೂ ಕಾರ್ಕಳ ದಂಡಾಧಿಕಾರಿಗಳಿಗೆ ಸೂಚನೆ ನೀಡಿರುತ್ತಾರೆ.
No comments:
Post a Comment