Monday, June 08, 2015

Daily Crimes Reported as On 08/06/2015 at 17:00 Hrs



ಅಪಘಾತ ಪ್ರಕರಣ 
  • ಪಡುಬಿದ್ರಿ: ದಿನಾಂಕ 07.06.2015 ರಂದು 22-30 ಗಂಟೆಗೆ KA 19 EB 8766 ನೇ ಮೋಟಾರು ಸೈಕಲ್‌ನ್ನು ಅದರ ಸವಾರ ಸದಾಶಿವರವರು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡುಬಂದು ನಡ್ಸಾಲು ಗ್ರಾಮದ ಬೀಡು ಎಂಬಲ್ಲಿ ರಾ.ಹೆ 66 ರಲ್ಲಿ ಮೋಟಾರು ಸೈಕಲ್, ಸವಾರನ ಹತೋಟಿ ತಪ್ಪಿ ರಸ್ತೆಗೆ ಬಿದ್ದು ಹಿಂಬದಿ ಸವಾರನಾದ ಸಿದ್ದಪ್ಪ ರವರು ಗಾಯಗೊಂಡಿದ್ದು ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 82/15 ಕಲಂ. 279,337, 304 (ಎ) ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ಈರ ಪ್ರಾಯ:65 ವರ್ಷ ಎಂಬುವರು ಟಿ.ಬಿ ಖಾಯಿಲೆಯಿಂದ ಬಳಲುತ್ತಿದ್ದವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:07/06/2015 ರಂದು ಸಂಜೆ 7:00 ಗಂಟೆಯಿಂದ ರಾತ್ರಿ 11:00  ಗಂಟೆಯ ಮಧ್ಯಾವಧಿಯಲ್ಲಿ ಕುಂದಾಪುರ ತಾಲೂಕು ಮೊಳಹಳ್ಲಿ ಗ್ರಾಮದ ಬಿದ್ಕಲ್‌ಕಟ್ಟೆ ಎಂಬಲ್ಲಿರುವ ತನ್ನ ಮನೆಯ ಬಳಿ ನೇಣು ಬಿಗಿದು  ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ : 25/15 ಕಲಂ. 174 ಸಿಆರ್‌ಪಿಸಿಯಂತೆ ದಾಖಲಿಸಿಕೊಳ್ಳಲಾಗಿದೆ.   
  • ಕುಂದಾಪುರ: ಅಮೃತಾ ಪ್ರಾಯ 20 ವರ್ಷ ರವರು ದಿನಾಂಕ 08.06.2015 ರಂದು ಬೆಳಿಗ್ಗೆ 08:30 ಗಂಟೆಗೆ ಕುಂದಾಪುರ ತಾಲೂಕು ಕುಂಭಾಶಿ ಗ್ರಾಮದ ಕೊರವಾಡಿ ಎಂಬಲ್ಲಿ ಅವರು ವಾಸ್ತವ್ಯವಿರುವ ಮನೆಯ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದು, ಅವರನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆ ತಂದು ವೈದ್ಯರಲ್ಲಿ ಪರೀಕ್ಷಿಸಿದಲ್ಲಿ ಅಮೃತಾಳು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ : 20/15 ಕಲಂ. 174 ಸಿಆರ್‌ಪಿಸಿಯಂತೆ ದಾಖಲಿಸಿಕೊಳ್ಳಲಾಗಿದೆ. 
  • ಕುಂದಾಪುರ: ಶೇಖರ @ ಗುಂಡ ಪ್ರಾಯ 28 ವರ್ಷ ರವರು ದಿನಾಂಕ 07.06.2015 ರಂದು 18:30 ಗಂಟೆಗೆ ತಾನು ವಾಸ್ತವ್ಯವಿದ್ದ ಮನೆಯಿಂದ ಕಂಡ್ಲೂರು ಪೇಟೆಗೆಂದು ಹೊರಟು ಕಾಲು ಸಂಕ ದಾಟುತ್ತಿರುವ ಸಮಯ ಆಕಸ್ಮಿಕವಾಗಿ ನೀರಿಗೆ ಬಿದ್ದು, ನೀರಿನಲ್ಲಿ ಮುಳುಗಿ ದಿನಾಂಕ 08.06.2015 ಬೆಳಿಗ್ಗೆ 10:30 ಗಂಟೆಗೆ ಕುಂದಾಪುರ ತಾಲೂಕು ಗುಲ್ವಾಡಿ ಗ್ರಾಮದ ಕುಚ್ಚೆಟ್ಟು ಹೊಳೆಯ ಕಟ್ಟುವಿನ ಬಳಿ ಹೊಳೆಯ ನೀರಿನಲ್ಲಿ ಶೇಖರ @ ಗುಂಡ ರವರ ಮೃತ ದೇಹ ದೊರೆತಿರುತ್ತದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ : 21/15 ಕಲಂ. 174 ಸಿಆರ್‌ಪಿಸಿಯಂತೆ ದಾಖಲಿಸಿಕೊಳ್ಳಲಾಗಿದೆ.    
  • ಕುಂದಾಪುರ: ಪ್ರಕಾಶ ಪೈ ಪ್ರಾಯ 34 ವರ್ಷ ರವರು ಅವಿವಾಹಿತರಾಗಿದ್ದು, ಎಳೆಂಟು ವರ್ಷಗಳಿಂದ ಮಾನಸಿಕ ಅಸ್ವಸ್ತೆಯಿಂದ ಕೂಡಿದ್ದು, ಮಂಗಳೂರು ಕಂಕನಾಡಿ ಫಾದರ್‌ ಮುಲ್ಲರ್ಸ್‌ ಆಸ್ಪತ್ರೆಯಿಂದ ಚಿಕಿತ್ಸೆ ನಡೆಯುತ್ತಿದ್ದು, ಇದೇ ಮಾನಸಿಕ ಖಾಯಿಲೆಯಿಂದ ಮನನೊಂದು ದಿನಾಂಕ 07.06.2015 ರಂದು ಸಂಜೆ 4:00 ಗಂಟೆಗೆ ಮಣಿಪಾಲಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟವರು ಕುಂದಾಪುರ ತಾಲೂಕು ಆನಗಳ್ಳಿ ಗ್ರಾಮದ ಆನಗಳ್ಳಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ : 22/15 ಕಲಂ. 174 ಸಿಆರ್‌ಪಿಸಿಯಂತೆ ದಾಖಲಿಸಿಕೊಳ್ಳಲಾಗಿದೆ.        

No comments: