ಅನುಮಾಸ್ಪದ ವ್ಯಕ್ತಿಯ ಬಂಧನ
- ಶಿರ್ವಾ: ಅಶೋಕ .ಪಿ, ಪಿಎಸ್ಐ, ಶಿರ್ವ ಪೊಲೀಸ್ ಠಾಣೆ ಇವರು ದಿನಾಂಕ: 23-06-2015 ರಂದು ರಾತ್ರಿ ರೌಂಡ್ಸು ಕರ್ತವ್ಯದಲ್ಲಿದ್ದು ಬೆಳಗ್ಗಿನ ಜಾವ ಸಮಯ ಸುಮಾರು 4:00 ಗಂಟೆಗೆ ಶಿರ್ವ ಗ್ರಾಮದ ಶಿರ್ವ ಸ್ಟೇಟ್ ಬ್ಯಾಂಕ್ ಕಟ್ಟಡದ ಕೆಳಗಡೆ ಓರ್ವ ವ್ಯಕ್ತಿ ತನ್ನ ಇರುವಿಕೆಯನ್ನು ಮರೆಮಾಚಿ ನಿಂತುಕೊಂಡಿದ್ದು ಆತನನ್ನು ವಿಚಾರಿಸಲು ಆತನ ಬಳಿ ಹೋದಾಗ ಆತನು ಓಡಲು ಪ್ರಯತ್ನಿಸಿದವನನ್ನು ಸಿಬ್ಬಂದಿಯವರ ಸಹಾಯದಿಂದ ಬೆನ್ನಟ್ಟಿ ಹಿಡಿದು ಪ್ರಶ್ನಿಸಿದಾಗ ಬಸವರಾಜ ಬಾಗಲಕೋಟೆ ಎಂದು ಹೇಳಿದ್ದು ತನ್ನ ಇರುವಿಕೆಯ ಬಗ್ಗೆ ಸರಿಯಾದ ಉತ್ತರ ನೀಡದೇ ನಂತರ ಕೂಲಂಕುಷವಾಗಿ ವಿಚಾರಿಸಿದಾಗ ರತ್ನಾಕರ ರಾಜು ಶೆಟ್ಟಿ, ಪ್ರಾಯ 47 ವರ್ಷ, ತಂದೆ: ರಾಜು ಶೆಟ್ಟಿ, ವಾಸ: ಮೂಡುಮನೆ, ಕುತ್ಯಾರು ಅಂಚೆ ಮತ್ತು ಗ್ರಾಮ, ಉಡುಪಿ ತಾಲೂಕು ಎಂದು ತಿಳಿಸಿದ್ದು ಈತನು ಯಾವುದೋ ಬೇವಾರೆಂಟ್ ತಕ್ಷೀರು ಮಾಡುವ ಇರಾದೆಯಿಂದ ಇರುವುದಾಗಿ ಆತನ ವರ್ತನೆಯಿಂದ ಕಂಡು ಬಂದ ಮೇರಗೆ ಈತನನ್ನು 4:15 ಗಂಟೆಗೆ ದಸ್ತಗಿರಿ ಮಾಡಿರುವುದಾಗಿದೆ. ಈ ಬಗ್ಗೆ ಶಿರ್ವಾ ಠಾಣೆಯಲ್ಲಿ 50/2015 ಕಲಂ 109 ಸಿಆರ್ಪಿಸಿ ರಂತೆ ಪ್ರಕರಣ ದಾಖಿಸಲಾಗಿದೆ.
No comments:
Post a Comment