ಹುಡುಗಿ ಕಾಣೆ:
- ಉಡುಪಿ ನಗರ: ಫಿರ್ಯಾದಿ ಸಂದೀಪ್ ಶೆಟ್ಟಿ (22) ತಂದೆ ದಿ ದೇವದಾಸ ಶೆಟ್ಟಿ ವಾಸ: ಕೇ/ಆಫ್ ಕೆ.ಎಸ್ ಬಾಳಿಗಾ ವಿಕ್ರಮ್ 4-3-17ಎ ಅಜ್ಜರಕಾಡು ಅಸ್ಪತ್ರೆ ಬಳಿ 3ನೇ ಕ್ರಾಸ್ ಉಡುಪಿ ಇವರ ತಂಗಿ ಸಂಧ್ಯಾ ಡಿ ಶೆಟ್ಟಿ (19 ವರ್ಷ 9 ತಿಂಗಳು) ಎಂಬವಳು ಅಜ್ಜರಕಾಡು ಜಿ ಶಂಕರ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ಬಿ.ಬಿ.ಎಂ ಕಲಿಯುತ್ತಿದ್ದು ಅವಳು ದಿನಾಂಕ: 16/06/2015 ರಂದು ತನ್ನ ತಾಯಿ ಮತ್ತು ಅಣ್ಣ ಇಲ್ಲದೇ ಇರುವ ಸಮಯದಲ್ಲಿ ಮಧ್ಯಾಹ್ನ ಸುಮಾರು 13:30 ಗಂಟೆಗೆ ಮನೆಗೆ ಬೀಗ ಹಾಕಿ ಅವಳ ಗೆಳತಿಯೊಂದಿಗೆ ಹೋಗಿದ್ದು ಈ ತನಕ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ ಎಂಬುದಾಗಿ ಸಂದೀಪ ಶೆಟ್ಟಿಯವರು ಠಾಣೆಗೆ ದೂರು ನೀಡಿದ್ದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 148/2015 ಕಲಂ ಹುಡುಗಿ ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ:
- ಗಂಗೊಳ್ಳಿ : ಪಿರ್ಯಾದಿ ಸುರೇಶ ಸೇರುಗಾರ ತಂದೆ: ಶಂಕರ ಸೇರುಗಾರ, ಶಂಕರ ನಿಲಯ, ಕೊಡಪಾಡಿ, ಗುಜ್ಜಾಡಿ ಗ್ರಾಮ, ಕುಂದಾಪುರ ತಾಲುಕು, ಎಂಬವರು ಮುಳ್ಳಿಕಟ್ಟೆ ಪಂಚ ಗಂಗಾವಳಿ ಸೊಸೈಟಿಯಲ್ಲಿ ಸದಸ್ಯನಾಗಿರುತ್ತಾರೆ. ಆಪಾದಿತ ಭದ್ರ ಪೂಜಾರಿ ಎಂಬವರು ಪಂಚಗಂಗಾವಳಿ ಸೊಸೈಟಿಯಲ್ಲಿ ಸಾಲ ಪಡೆಯುವರೇ ಅರ್ಜಿ ಸಲ್ಲಿಸಿದ್ದು ಸದ್ರಿ ಅರ್ಜಿಗೆ ಸಾಕ್ಷೀದಾರನಾಗಿ ಪಿರ್ಯಾದಿದಾರರಲ್ಲಿ ಭದ್ರ ಪೂಜಾರಿ ರವರು ಸಹಿಮಾಡಲು ತಿಳಿಸಿರುತ್ತಾರೆ. ಆಪಾದಿತ ಭದ್ರ ಪೂಜಾರಿ ರವರು ಕೆಲಸ ಮಾಡದೆ ಯಾವುದೇ ಸಂಪಾದನೆ ಇಲ್ಲದೇ ತಿರುಗಾಡುತ್ತಿದ್ದ ಕಾರಣ ಪಿರ್ಯಾದಿದಾರರು ಸಾಲದ ಅರ್ಜಿಗೆ ಸಹಿಮಾಡಿರಲಿಲ್ಲ. ಅದೇ ದ್ವೇಷದಲ್ಲಿ ಆಪಾದಿತ ಭದ್ರ ಪೂಜಾರಿಯು ಪಿರ್ಯಾದಿದಾರರ ಮೇಲೆ ಹಲ್ಲೆ ಮಾಡುವ ಉದ್ದೇಶದಿಂದ ದಿನಾಂಕ 16/06/2015 ಸಾಯಂಕಾಲ 07-15 ಗಂಟೆಯ ಸಮಯಕ್ಕೆ ತ್ರಾಸಿ ಅನುಗ್ರಹ ವೈನ್ ಶಾಪ್ ಬಳಿ ಬರುವಂತೆ ಹೇಳಿ ಆಪಾದಿತನು ನನ್ನ ಸಾಲದ ಅರ್ಜಿಗೆ ಯಾಕೆ ಸಹಿಮಾಡಲಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು ಬೀಯರ್ ಬಾಟಲಿಯಿಂದ ಪಿರ್ಯಾದಿದಾರರ ಬಲಭಾಗ ಕೆನ್ನೆಗೆ ಮತ್ತು ಹಣೆಗೆ ಹೊಡೆದು ಗಾಯಗೊಳಿಸಿರುತ್ತಾನೆ. .ಈ ಬಗ್ಗೆ ಸುರೇಶ ಸೇರುಗಾರ ರವರು ಠಾಣೆಗೆ ದೂರು ನೀಡಿದ್ದು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 87/ 2015 324, 504 ಐಪಿಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment