ಬೆದರಿಕೆ ಪ್ರಕರಣ :
- ಶಂಕರನಾರಾಯಣ: ದಿನಾಂಕ 27-05-2015 ರಂದು ಬೆಳಿಗ್ಗೆ 11:00 ಗಂಟೆಗೆ ALI JEVENCA ಎಂಬ ವಿದೇಶಿ ವ್ಯಕ್ತಿಯು ಕುಂದಾಪುರ ತಾಲೂಕು ಅಲ್ಪಾಡಿ ಗ್ರಾಮದ ಆರ್ಡಿ ಎಂಬಲ್ಲಿರುವ ಬಿ. ಸಂತೋಷ್ ಕುಮಾರ್ ಶೆಟ್ಟಿ ತಂದೆ : ಭುಜಂಗ ಶೆಟ್ಟಿ ವಾಸ: ಸೌರಭ ನಿಲಯ, ಆರ್ಡಿ ಅಲ್ಪಾಡಿ ಗ್ರಾಮ ಇವರ ಹೆಂಡತಿಯ ಮನೆಗೆ ಅಕ್ರಮವಾಗಿ ನುಗ್ಗಿ ಇಂಗ್ಲೀಷ್ ಭಾಷೆಯಲ್ಲಿ ಅವಾಚ್ಯ ಶಬ್ದದಿಂದ ಬೈದು, ಕೈಯಲ್ಲಿ ಮಾರಕ ಆಯುಧ ಹಿಡಿದು ಜಳಪಿಸುತ್ತಾ ಸಂತೋಷ್ ಕುಮಾರ್ ಶೆಟ್ಟಿ ಮತ್ತು ಇವರ ಕಾರು ಹಾಗೂ ಆವರ ಮನೆಯನ್ನು ಸುಟ್ಟು ಹಾಕುತ್ತೇನೆ ಎಂದು ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 129/15 ಕಲಂ: 448, 504, 506 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment