ಆತ್ಮಹತ್ಯೆ ಪ್ರಕರಣ
- ಹೆಬ್ರಿ:ಕಾರ್ಕಳ ತಾಲೂಕು ಶಿವಪುರ ಗ್ರಾಮದ ಶ್ರೀ ಜನನಿ ಬ್ಯಾಣ ನಿವಾಸಿ ಗೋಪಾಲ್ (24) ರವರ ತಂದೆ ಅಪ್ಪುಹರಿಜನರವರು ವಿಪರೀತ ಮದ್ಯ ಸೇವನೆ ಮಾಡುವ ಚಟವನ್ನು ಹೊಂದಿದ್ದು, ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:23/05/2015 ರಂದು ಸಂಜೆ 4:45 ಗಂಟೆಗೆ ತಮ್ಮ ಮನೆಯ ಹಿಂದೆ ಇರುವ ಪೇರಳೆ ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಗೋಪಾಲ್ರವರ ದೂರಿನಂತೆ ಹೆಬ್ರಿ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 20/15 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮಟ್ಕಾ ದಾಳಿ ಪ್ರಕರಣ
- ಹೆಬ್ರಿ:ಶ್ರೀ ಸೀತಾರಾಮ ಪಿ, ಪೊಲೀಸ್ ಉಪ ನಿರೀಕ್ಷಕರು, ಹೆಬ್ರಿ ಪೊಲೀಸ್ ಠಾಣೆರವರು ತಮ್ಮ ಠಾಣಾ ಸಿಬ್ಬಂದಿಯವರೊಂದಿಗೆ ದಿನಾಂಕ:23/05/2015 ರಂದು ಇಲಾಖಾ ಜೀಪಿನಲ್ಲಿ ಠಾಣಾ ಸರಹದ್ದಿನಲ್ಲಿ ರೌಂಡ್ಸ್ನಲ್ಲಿರುವಾಗ ಸಂಜೆ 4:30 ಗಂಟೆಗೆ ಮುನಿಯಾಲ್ ಬಸ್ ನಿಲ್ದಾಣದಲ್ಲಿ ನೀಲಿ ಬಣ್ಣದ ಟೀ-ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ಧರಿಸಿದ ಓರ್ವ ವ್ಯಕ್ತಿಯು “ಒಂದು ರೂಪಾಯಿಗೆ 70” ಎಂದು ಮಟ್ಕಾ ಜೂಜಾಟಕ್ಕೆ ಜನರನ್ನು ಕರೆದು ಚೀಟಿಯ ಮೇಲೆ ಪೆನ್ನಿನಿಂದ ಅಂಕೆಗಳನ್ನು ಬರೆಯುತ್ತಿದ್ದು, ಈತನೇ ಮಟ್ಕಾ ಬರೆಯುತ್ತಿದ್ದ ವ್ಯಕ್ತಿ ಎಂದು ಖಚಿತ ಪಡಿಸಿಕೊಂಡು ಆತನನ್ನು ವಿಚಾರಿಸಿದ ಸಂದರ್ಭದಲ್ಲಿ ತನ್ನ ಹೆಸರು ಸುರೇಶ್ ಶೆಟ್ಟಿ (43), ತಂದೆ:ಸುಬ್ಬಣ್ಣ ಶೆಟ್ಟಿ, ವಾಸ:ಪಾಲ್ದಡಿ ಮುಟ್ಲಪಾಡಿ, ವರಂಗ ಗ್ರಾಮ ಎಂದು ತಿಳಿಸಿದ್ದಲ್ಲದೇ ತಾನು ಸ್ವಂತ ಲಾಭಕ್ಕಾಗಿ ಸಾರ್ವಜನಿಕರಿಂದ ಮಟ್ಕಾ ಜೂಜಾಟದ ಬಗ್ಗೆ ಹಣ ಸಂಗ್ರಹಿಸುತ್ತಿರುವುದಾಗಿ ಒಪ್ಪಿಕೊಂಡ ಸದ್ರಿ ಆರೋಪಿತನನ್ನು ಪಂಚರ ಸಮಕ್ಷಮ ಆತನಲ್ಲಿ ದೊರೆತ ನಗದು ಹಣ, ಮಟ್ಕಾ ನಂಬ್ರ ಬರೆದ ಚೀಟಿ ಹಾಗೂ ಬಾಲ್ ಪೆನ್ ಸಮೇತ ದಸ್ತಗಿರಿ ಮಾಡಿ ಆತನ ವಿರುದ್ಧ ಠಾಣೆಯಲ್ಲಿ ಅಪರಾಧ ಕ್ರಮಾಂಕ 58/15 ಕಲಂ:78(1)(111) ಕೆ.ಪಿ ಆಕ್ಟ್ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹುಡುಗ ಕಾಣೆ ಪ್ರಕರಣ
- ಕೋಟ:ಪಿರ್ಯಾದಿದಾರರಾದ ಅಬ್ದುಲ್ ರೆಹಮಾನ್ (42), ತಂದೆ:ದಿವಂಗತ ಯೂಸೂಪ್ ಸಾಹೇಬ್, ವಾಸ:ಸಾಹೀಲ್ ಮಂಜಿಲ್, ತೆಕ್ಕಟ್ಟೆ ಗ್ರಾಮ, ಕುಂದಾಪುರ ತಾಲೂಕುರವರ ಮಗನಾದ ಸಾಹೀಲ್ (17) ಎಂಬವನು ಬ್ರಹ್ಮಾವರದ ಎಸ್.ಎಮ್.ಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ದಿನಾಂಕ 23/05/2015 ರಂದು ಮನೆಯಿಂದ ಕ್ರಿಕೆಟ್ ಆಟ ಆಡಲು ಹೋಗುತ್ತೇನೆ ಎಂದು ಹೇಳಿ ಹೋದವನು, ಸಂಜೆ 7:00 ಗಂಟೆಯಾದರೂ ಮನೆಗೆ ಬಾರದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಅಬ್ದುಲ್ ರೆಹಮಾನ್ರವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 127/2015 ಕಲಂ:363 ಐ.ಪಿ.ಸಿಯಂತೆ ಪ್ರಕರಣ ದಾಕಲಿಸಿಕೊಳ್ಳಲಾಗಿದೆ.
No comments:
Post a Comment