ಅಪಘಾತ ಪ್ರಕರಣ
- ಬೈಂದೂರು:ಪಿರ್ಯಾದಿದಾರರಾದ ಜಾಕಿರ ಹುಸೇನ್ (44) ತಂದೆ:ರಹೀಮ್ ಸಾಹೇಬ್ ವಾಸ:ನೂರ್ ಮೊಹಲ್ಲಾ, ಮದಕರಿಪುರ ಚಿತ್ರದುರ್ಗ ಜಿಲ್ಲೆರವರು ಕೆ.ಎ 32 ಬಿ 0540 ನೇ ಟ್ಯಾಂಕರಿನ ಕ್ಲೀನರ್ ಆಗಿದ್ದು ದಿನಾಂಕ:06/05/2015 ರಂದು ಕೆ.ಎ 32 ಬಿ 0540 ನೇ ಟ್ಯಾಂಕರಿನಲ್ಲಿ ಬೆಳಗಾವಿಯಿಂದ ಉಡುಪಿ ಕಡೆಗೆ ಹೋಗುತ್ತಾ ಟ್ಯಾಂಕರನ್ನು ಅದರ ಚಾಲಕ ಮಾಭು ಭಾಷಾರವರು ಚಲಾಯಿಸುತ್ತಿದ್ದರು, ದಿನಾಂಕ:07/05/2015 ರಂದು ರಾತ್ರಿ 12:00 ಗಂಟೆಗೆ ಕುಂದಾಪುರ ತಾಲೂಕು ಕಿರಿಮಂಜೇಶ್ವರ ಗ್ರಾಮದ ಮೂಕಾಂಬಿಕ ಟಿಂಬರ್ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಗುತ್ತಿರುವಾಗ ಟ್ಯಾಂಕರ್ನ ಚಾಲಕನು ಯಾವೂದೇ ಸೂಚನೆ ನೀಡದೇ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ, ಟ್ಯಾಂಕರಿನ ಹಿಂಬದಿಯಿಂದ ಬರುತ್ತಿದ್ದ ಕೆ.ಎ 47 2829 ನೇ ಕಾರು ಟ್ಯಾಂಕರ್ಗೆ ಡಿಕ್ಕಿ ಹೊಡೆದು, ಕಾರಿನಲ್ಲಿದ್ದವರಿಗೆ ತೀವೃ ಸ್ವರೂಪದ ರಕ್ತ ಗಾಯವಾಗಿರುತ್ತದೆ. ಈ ಅಪಘಾತಕ್ಕೆ ಕೆ.ಎ 32 ಬಿ 0540 ನೇ ಟ್ಯಾಂಕರ್ ಚಾಲಕ ಮಾಭು ಭಾಷಾರವರು ಯಾವುದೇ ಸೂಚನೆ ನೀಡದೇ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಒಮ್ಮೆಲೆ ಬ್ರೇಕ್ ಹಾಕಿರುವುದು ಹಾಗೂ ಕೆ.ಎ 47 2829 ನೇ ಕಾರು ಚಾಲಕ ಮುಂದೆ ಹೋಗುತ್ತಿದ್ದ ವಾಹನದೊಂದಿಗೆ ಸರಿಯಾದ ಅಂತರ ಕಾಯ್ದುಕೊಳ್ಳದೇ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿರುವುದೇ ಕಾರಣವಾಗಿರುತ್ತದೆ.ಈ ಬಗ್ಗೆ ಜಾಕಿರ ಹುಸೇನ್ರವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 109/2015 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment