ಹಲ್ಲೆ ಪ್ರಕರಣ :
- ಹೆಬ್ರಿ : ದಿನಾಂಕ 13-05-2015 ರಂದು ಅಪರಾಹ್ನ 1:30 ಗಂಟೆಗೆ ಉಡುಪಿ ತಾಲೂಕು, ನಾಲ್ಕೂರು ಗ್ರಾಮದ, ಚೆಂದಾಲ್ ಕಟ್ಟೆ, ಕಜ್ಕೆ ಮುದ್ದೂರು ಎಂಬಲ್ಲಿ ಶುಕ್ರ (75), ತಂದೆ: ಚಿಕ್ಕಇವರ ಮನೆಯಲ್ಲಿ ಇವರ ಮಗ ಸುಂದರ ಮನೆಯಲ್ಲಿ ತಂದೆಯೊಂದಿಗೆ ಜಗಳ ಮಾಡಿ ತಂದೆಯನ್ನು ಮನೆಯಿಂದ ಎಳೆದುಕೊಂಡು ಬಂದು ಅಂಗಳಕ್ಕೆ ಕಟ್ಟಿದ ಕಲ್ಲಿನ ಮೇಲೆ ದೂಡಿ ಹಾಕಿದ್ದು, ಎಡ ಭುಜದ ಕೆಳಗೆ ಬೆನ್ನಿಗೆ ಕಲ್ಲಿನಿಂದ ಹೊಡೆದ ಪರಿಣಾಮ ರಕ್ತ ಗಾಯವಾಗಿರುವುದಲ್ಲದೇ ಎಡ ಎದೆಗೆ ಗುದ್ದಿದ ನೋವಾಗಿದ್ದು, ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಶುಕ್ರ ರವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 43 /15 ಕಲಂ: 324 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment