ಅಪಘಾತ ಪ್ರಕರಣ
- ಮಣಿಪಾಲ: ದಿನಾಂಕ 02.05.15 ರಂದು ಬೆಳಿಗ್ಗೆ 8:50 ಗಂಟೆಗೆ ಪಿರ್ಯಾದಿದಾರರಾದ ಉಮೇಶ್ ಎಸ್ ನಾಯಕ್ (42) ತಂದೆ: ದಿ|| ಶ್ರೀನಿವಾಸ ಪಿ ನಾಯಕ್ ವಾಸ:ಎ-11, ದತ್ತಣೆ ಅಪಾರ್ಟ್ ಮೆಂಟ್ , ನಂ -4, ಸಿ.ಹೆಚ್.ಎಸ್.ಎಲ್ ಪಾರಿಕ್ ನಗರ, ಎಸ್.ವಿ ರೋಡ್, ಕಾಂದಿವಿಲಿ ವೆಸ್ಟ್ , ಮುಂಬೈ ರವರು ತನ್ನ ತಾಯಿ ಶಾರದಾರೊಂದಿಗೆ ಮರ್ಣೆ ಗ್ರಾಮದ ಬಿರೆಬೆಟ್ಟು ಕ್ರಾಸ್, ಬೊಬ್ಬರ್ಯ ದೇವಸ್ಥಾನದ ಬಳಿ ನಿಂತುಕೊಂಡಿರುವಾಗ ಅಲೆವೂರು ರಸ್ತೆ ಕಡೆಯಿಂದ ಕಾರ್ಕಳ ಕಣಾಂಜಾರು ಕಡೆಗೆ ಮೋಟಾರ್ ಸೈಕಲ್ ನಂ ಕೆಎ 20 ಇಸಿ 9085 ನೇ ದರ ಸವಾರ ಲಕ್ಷ್ಮೀನಾರಾಯಣ ಎಂಬಾತನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡ ಬದಿಯಲ್ಲಿ ಚಲಾಯಿಸಿಕೊಂಡು ಬಂದು ಮಣ್ಣು ರಸ್ತೆಯಲ್ಲಿ ನಿಂತಿದ್ದ ಶಾರದಾರವರಿಗೆ ಡಿಕ್ಕಿ ಹೊಡೆದು ಬಲ ಕಾಲಿನ ಮೇಲೆ ಚಲಾಯಿಸಿಕೊಂಢು ಹೋಗಿ ಹತೋಟಿ ತಪ್ಪಿ ರಸ್ತೆಗೆ ಬಿದ್ದಿದ್ದು ಪರಿಣಾಮ ಶಾರದಾರವರ ಬಲಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು, ತಲೆಯ ಬಲಬದಿಗೆ ತರಚಿದ ಗಾಯವಾಗಿರುತ್ತದೆ. ಸವಾರನಿಗೂ ಗುದ್ದಿದ ಗಾಯವಾಗಿರುತ್ತದೆ. ಪಿರ್ಯಾಧಿದಾರರು ಶಾರದಾರವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೇಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿರುವುದಾಗಿದೆ. ಈ ಬಗ್ಗೆ ಉಮೇಶ್ ಎಸ್ ನಾಯಕ್ ರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 69/2015 ಕಲಂ 279, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment