Friday, May 01, 2015

Daily Crime Reports As on 01/05/2015 at 19:30 Hrs



ಸರ ಅಪಹರಣಕ್ಕೆ ಪ್ರಯತ್ನ

  • ಉಡುಪಿ: ದಿನಾಂಕ 01/05/2015 ರಂದು ಫಿರ್ಯಾದಿದಾರರಾದ ಶ್ರೀಮತಿ ಶಕುಂತಳಾ (62) ವಾಸ ಅನುಗ್ರಹ ನಿಲಯ  ಎಂ.ಜಿ.ಎಂ ಲೇಡಿಸ್‌ ಹಾಸ್ಸೇಲ್‌ ಎದುರು 5-37-1 ಕುಂಜಿಬೆಟ್ಟು ಉಡುಪಿ ರವರು ತಮ್ಮ ಮಗಳು ರೇಶ್ಮಾರೊಂದಿಗೆ ಅಂಬಲಪಾಡಿ ದೇವಸ್ದಾನಕ್ಕೆ ಹೋಗಿ ಮನೆಗೆ ಹೋಗಲು ಸತ್ಯನಾಥ ಸಿಟಿ ಬಸ್ಸಿನಲ್ಲಿ ಹೊರಟ್ಟಿದ್ದು ಸದ್ರಿ ಬಸ್ಸು 16:20 ಗಂಟೆಗೆ ಸಿಟಿ ಬಸ್ಸ್‌ ನಿಲ್ದಾಣದಲ್ಲಿ ನಿಂತಿರುವಾಗ ಬಸ್ಸಿನಲ್ಲಿದ್ದ ಒಬ್ಬ ವ್ಯಕ್ತಿಯು ಫಿರ್ಯಾದಿದಾರರ ಕುತ್ತಿಗೆಗೆ ಕೈ ಹಾಕಿ  ಚಿನ್ನದ ಕರಿಮಣಿ ಸರವನ್ನು ಎಳೆಯಲು ಪ್ರಯತ್ನಿಸಿದಾಗ ಫಿರ್ಯಾದಿದಾರರು ಬೊಬ್ಬೆ ಹೊಡೆದಿದ್ದು, ಆಗ ಆತನು ಬಸ್ಸಿನಿಂದ ಇಳಿದು ಓಡಿ ಹೋಗಿರುವುದಾಗಿದೆ ಎಂಬುದಾಗಿ ಶ್ರೀಮತಿ ಶಕುಂತಳಾ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 101/2015 ಕಲಂ 393 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.


No comments: