ಅಪಘಾತ ಪ್ರಕರಣ
- ಶಂಕರನಾರಾಯಣ:ಆರೋಪಿ ಮನೋಜ್ ಹೊಸ ಐಷರ್ ವಾಹನವನ್ನು ದಿನಾಂಕ:20/04/2015 ರಂದು ಸಂಜೆ 6:30 ಗಂಟೆಗೆ ಕುಂದಾಫುರ ತಾಲೂಕು 74 ಉಳ್ಳೂರು ಗ್ರಾಮದ ಅಂಸಾಡಿ ಜಯರಾಮ ಹೆಬ್ಬಾರ್ರವರ ಮನೆಯ ಬಳಿ ಅಮಾಸೆಬೈಲು ಕಡೆಯಿಂದ ಸಿದ್ದಾಪುರ ಕಡೆಗೆ ಅಮಾಸೆಬೈಲು ಸಿದ್ಧಾಪುರ ಮುಖ್ಯ ರಸ್ತೆಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸಿದ್ಧಾಪುರ ಕಡೆಯಿಂದ ಅಮಾಸೆಬೈಲು ಕಡೆಗೆ ಪಿರ್ಯಾದಿದಾರರಾದ ಮಂಜುನಾಥ ದಾಸ್ (43) ತಂದೆ:ಪ್ರಭಾಕರ ದಾಸ, ವಾಸ:ಗೊಡ್ಡುಮಕ್ಕಿ ತೊಂಬಟ್ಟು, ಮಚ್ಚಟ್ಟು ಗ್ರಾಮ ಮತ್ತು ಅಂಚೆ, ಕುಂದಾಪುರ ತಾಲೂಕುರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಕೆಎ 20 ಎಕ್ಸ್ 2640 ನಂಬ್ರದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಮಂಜುನಾಥ ದಾಸ್ರವರ ಬಲಕೈ ತೋಳಿಗೆ ಮತ್ತು ಬಲಕೈ ಬೆರಳಿಗೆ ಪೆಟ್ಟಾಗಿರುತ್ತದೆ. ಈ ಬಗ್ಗೆ ಮಂಜುನಾಥ ದಾಸ್ರವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣಾ ಅಪರಾಧ ಕ್ರಮಾಂಕ 71/15 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
- ಶಂಕರನಾರಾಯಣ:ಸಂತೋಷ ಶ್ಯಾನುಭೋಗರವರು ದ್ವಿತೀಯ ವರ್ಷದ ಬಿ.ಕಾಂ ವಿದ್ಯಾಭ್ಯಾಸ ಮಾಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಪರೀಕ್ಷೆ ವಿಚಾರದಲ್ಲಿ ಟೆನ್ಶನ್ ಮಾಡಿಕೊಳ್ಳುತ್ತಿದ್ದು ಸರಿಯಾಗಿ ಊಟ ಹಾಗೂ ನಿದ್ದೆ ಮಾಡದೇ ರಾತ್ರಿ ಸಮಯ ನಿದ್ದೆ ಬಿಟ್ಟು ಓದುತ್ತಿದ್ದನು. ದಿನಾಂಕ:20/04/2015 ರಂದು ರಾತ್ರಿ ಸಮಯ ಮನೆಯ ಹತ್ತಿರದಲ್ಲಿರುವ ನಾಗಬ್ರಹ್ಮ ಸ್ಥಾನದ ಬಳಿ ಓದಲು ಹೋದವನು ಓದು ಮುಗಿಸಿ ವಾಪಾಸ್ಸು ಮನೆಗೆ ಬರುತ್ತಿರುವಾಗ ಕಾಲು ಜಾರಿ ತೋಡಿಗೆ ಕುಸಿದು ಬಿದ್ದು, ಅಸ್ವಸ್ಥಗೊಂಡಿದ್ದು ಹಾಗೂ ಆತನ ಮೂಗಿನಲ್ಲಿ ಬಾಯಿಯಲ್ಲಿ ನೊರೆ ಬರುತ್ತಿದ್ದರಿಂದ ಆತನನ್ನು ಕುಂದಾಫುರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದಾಗ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯವರು ಸಂತೋಷ ಶ್ಯಾನುಭೋಗನನ್ನು ಪರೀಕ್ಷಿಸಿ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬುದಾಗಿ ನಾರಾಯಣ ಶ್ಯಾನುಭೋಗ (54) ತಂದೆ:ನರಸಿಂಹ ಶ್ಯಾನುಭೋಗ ವಾಸ: ಬಡಾಬಾಳು ಮನೆ, ಜನ್ಸಾಲೆ ಸಿದ್ಧಾಪುರ ಗ್ರಾಮ, ಕುಂದಾಪುರ ತಾಲೂಕುರವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 05/15 ಕಲಂ:174 ಸಿಆರ್ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment