Friday, April 17, 2015

Daily Crimes Reported as On 17/04/2015 at 07:00 Hrs



ಹಲ್ಲೆ ಪ್ರಕರಣ

  • ಹಿರಿಯಡ್ಕ: ಉಡುಪಿ ತಾಲೂಕು ಅಂಜಾರು ಗ್ರಾಮದ ಉಡುಪಿ ಜಿಲ್ಲಾ ಕಾರಾಗ್ರಹದ ಬ್ಯಾರಕ್ ನಂಬ್ರ 1 ರಲ್ಲಿ ನ್ಯಾಯಾಂಗ ಬಂಧನದಲ್ಲಿ ಇರುವ  ಪಿರ್ಯಾದಿ  ಪ್ರಶಾಂತ್ ಮೊಗವೀರ ಈತನಿಗೆ  ದಿನಾಂಕ: 14/04/2015 ರಂದು ಬೆಳಿಗ್ಗೆ 08:30 ಗಂಟೆಗೆ ಅದೇ ಬ್ಯಾರಕ್  ನಲ್ಲಿ ಇರುವ ಹೆಸರು ತಿಳಿಯದ ಓರ್ವ ಖೈದಿಯು ಬಲಕೈ ಬೆರಳುಗಳನ್ನು ತಿರುಚಿ ಕೈಯಿಂದ ಹೊಡೆದು ಕಾಲಿನಿಂದ ತುಳಿದು ಹಲ್ಲೆ ನಡೆಸಿ ನಂತರ ಮಧ್ಯಾಹ್ನ 3:30 ಗಂಟೆಯ ವೇಳೆಗೆ ಪಿರ್ಯಾದುದಾರರ ತಲೆಯನ್ನು ಕೈಗಳಿಂದ ಗಟ್ಟಿಯಾಗಿ ಹಿಡಿದು ಗೋಡೆಗೆ ತಲೆಯನ್ನು ಜಜ್ಜಿ ನೋವುಂಟು ಮಾಡಿದ್ದು ಪಿರ್ಯಾದುದಾರರನ್ನು ಜೈಲಿನ ಸಿಬ್ಬಂದಿಯವರು ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಅಪರಾಧ ಪ್ರಕರಣ 27/15 ಕಲಂ 323 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕೋಟ:  ಪಿರ್ಯಾದಿ ಉಮೇಶ್‌ ಪೂಜಾರಿ ಇವರು ದಿನಾಂಕ 16/04/2015 ರಂದು   ಮದ್ಯಾಹ್ನ 3:00 ಗಂಟೆಗೆ ಮನೆಯಿಂದ ನಡೆದುಕೊಂಡು  ಉಡುಪಿ ತಾಲೂಕು ಕೋಟತಟ್ಟು ಗ್ರಾಮದ ಮೊಯಿದಿನ್‌ ಸಾಹೇಬರ ಜಾಗದ ಕಾಲು ದಾರಿಯಲ್ಲಿ ಹೋಗುತ್ತಿರುವಾಗ  ರಾಜು ಪೂಜಾರಿ ಮತ್ತು ಸುನಿಲ್‌ ಎಂಬವರು ಪಿರ್ಯಾದಿದಾರರನ್ನು  ಅಡ್ಡ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಆರೋಪಿತರು  ಸೇರಿ ಕೈಯಿಂದ ಹೊಡೆದು ದೂಡಿದಾಗ ಪಿರ್ಯಾದಿದಾರರು ನೆಲಕ್ಕೆ ಬಿದ್ದಾಗ ಕಾಲಿನಿಂದ ತುಳಿದಿದ್ದು,ಪರಿಣಾಮ ಪಿರ್ಯಾದಿದಾರರಿಗೆ ಮೈಕೈ ಗೆ ಗುದ್ದಿದ ನೋವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಅಪರಾಧ ಪ್ರಕರಣ 73/15 ಕಲಂ 341, 323, 504  ಜೊತೆಗೆ  34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: