ಮನುಷ್ಯ ಕಾಣೆ ಪ್ರಕರಣ
- ಶಂಕರನಾರಾಯಣ: ರವೀಂದ್ರ ಕೊಠಾರಿ ಎಂಬವರು ದಿನಾಂಕ 14/04/2015 ರಂದು ಮದುವೆಗೆ ಬೇಕಾದ ವಸ್ತು ಖರೀದಿ ಹಾಗೂ ಮದುವೆ ದಿಬ್ಬಣ ವಾಹನ ಶೃಂಗಾರದ ಬಗ್ಗೆ ವಸ್ತುಗಳನ್ನು ಖರೀದಿಸಲು ಸಿದ್ದಾಪುರ ಪೇಟೆಗೆ ಹೋದವರು ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ 67/15 ಕಲಂ ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
- ಪಡುಬಿದ್ರಿ: ಪಿರ್ಯಾದಿ ಮಹದೇವ ಇವರು ಕೊಂಕಣ್ ರೈಲ್ವೇ ಇಲಾಖೆಯಲ್ಲಿ ಟ್ರ್ಯಾಕ್ ಸೇಪ್ಟಿಮೆನ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 15.04.2015 ರಂದು 6:00 ಗಂಟೆಗೆ ಮೂಲ್ಕಿ ಸ್ಟೇಷನ್ನಿಂದ ಟ್ರ್ಯಾಕ್ ಚೆಕ್ ಮಾಡಿಕೊಂಡು ಬರುತ್ತಿರುವಾಗ ಬೆಳಿಗ್ಗೆ ಸುಮಾರು 9:10 ಗಂಟೆಗೆ ಪಲಿಮಾರಿನ ಹೊಯಿಗೆ ಎಂಬಲ್ಲಿ 719/0 ಕೆಎಮ್ ಪೋಸ್ಟಿಂದ ಸ್ವಲ್ಪ ಮುಂದಕ್ಕೆ ಅಂದರೆ 719/01 ಹಾಗೂ 719/00 ರ ಮಧ್ಯೆ ರೈಲ್ವೇ ಟ್ರ್ಯಾಕ್ನ ಶೋಲ್ಡರ್ನಲ್ಲಿ ಸುಮಾರು 30 ವರ್ಷ ಪ್ರಾಯದ ಒಂದು ಗಂಡಸಿನ ದೇಹವು ಕವುಚಿ ಬಿದ್ದಿದ್ದು, ನಿನ್ನೆ ರಾತ್ರಿ ಅಥವಾ ಈ ದಿನ ಬೆಳಿಗ್ಗೆ ಟ್ರ್ಯಾಕ್ ಮೇಲೆ ಹಾದು ಹೋಗುವ ಯಾವುದೋ ರೈಲಿನ ಪ್ರಯಾಣಿಕರಾಗಿದ್ದು ಪ್ರಯಾಣದ ವೇಳೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಪಡುಬಿದ್ರಿ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 07/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment