Thursday, April 09, 2015

Daily Crimes Reported as On 09/04/2015 at 17:00 Hrs


ಕಳವು ಪ್ರಕರಣಗಳು
  • ಕುಂದಾಪುರ:ಪಿರ್ಯಾದಿದಾರರಾದ ಎಲ್‌.ಎನ್‌ ಮುರಳೀಧರ, ಶಾಖಾಧಿಕಾರಿ,  ಯುನೈಟೆಡ್‌ ಇಂಡಿಯಾ ಇನ್ಸುರೆನ್ಸ್‌ ಕಂಪೆನಿ ಲಿಮಿಟೆಡ್‌, ಲಕ್ಷ್ಮಿ ನರಸಿಂಹ ಕಾಂಪ್ಲೆಕ್ಸ್‌, ಎನ್‌.ಹೆಚ್-66, ಕುಂದಾಪುರರವರು ಯುನೈಟೆಡ್‌ ಇಂಡಿಯಾ ಇನ್ಸುರೆನ್ಸ್‌ ಕಂಪೆನಿ ಲಿಮಿಟೆಡ್‌ನ ಕುಂದಾಪುರ ಶಾಖೆಯ ಶಾಖಾಧಿಕಾರಿಯಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ:08/04/2015 ರ ಸಂಜೆ 6:30 ಗಂಟೆಯಿಂದ ದಿನಾಂಕ:09/04/2015 ರ ಬೆಳಿಗ್ಗೆ 09:30 ಗಂಟೆ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಸದ್ರಿ ಕಂಪೆನಿಯ ಹಿಂದಿನ ಕಿಟಕಿಯ ಎರಡು ಕಬ್ಬಿಣದ ರಾಡನ್ನು ತುಂಡು ಮಾಡಿ ಒಳ ಪ್ರವೇಶಿಸಿ ಕಛೇರಿಯ ಕ್ಯಾಶ್‌ ಬಾಕ್ಸನ್ನು ಜಖಂಗೊಳಿಸಿ, ಅದರಲ್ಲಿದ್ದ ರೂಪಾಯಿ 34,857/- ಹಾಗೂ ಎಲ್‌.ಎನ್‌ ಮುರಳೀಧರರವರ ಛೇಂಬರ್‌ನ ಡ್ರಾವರ್‌ನಲ್ಲಿದ್ದ ರೂಪಾಯಿ 3,500/-, ಒಟ್ಟು ಮೌಲ್ಯ ರೂಪಾಯಿ 38,357/- ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.ಈ ಬಗ್ಗೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 107/2015 ಕಲಂ:454, 457, 380 .ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕುಂದಾಪುರ:ಪಿರ್ಯಾದಿದಾರರಾದ ಪುರುಷೋತ್ತಮ ಎಂ. (57) ತಂದೆ:ಹೆಚ್‌. ಸುಂದರ, ವಾಸ:ಶಾಖಾಧಿಕಾರಿ, ದಿ ನ್ಯೂ ಇಂಡಿಯಾ ಅಶ್ಯುರೆನ್ಸ್‌ ಕಂಪೆನಿ ಲಿಮಿಟೆಡ್‌, ಕುಂದಾಪುರರವರು ದಿ ನ್ಯೂ ಇಂಡಿಯಾ ಅಶ್ಯುರೆನ್ಸ್‌ ಕಂಪೆನಿ ಲಿಮಿಟೆಡ್‌ನ ಕುಂದಾಪುರ ಶಾಖೆಯ ಶಾಖಾಧಿಕಾರಿಯಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ:08/04/2015 ರ ರಾತ್ರಿ 8:00 ಗಂಟೆಯಿಂದ ದಿನಾಂಕ:09/04/2015 ರ ಬೆಳಿಗ್ಗೆ 09:30 ಗಂಟೆ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಸದ್ರಿ ಕಂಪೆನಿಯ ಎದುರಿನ ಶೆಟರ್‌ ಡೋರ್‌ಗೆ ಅಳವಡಿಸಿದ ಬೀಗವನ್ನು ಒಡೆದು ಒಳ ಪ್ರವೇಶಿಸಿ ಪುರುಷೋತ್ತಮ ಎಂ.ರವರ ಛೇಂಬರ್‌ನ ಸೇಫ್‌ ಲಾಕರ್‌ನಲ್ಲಿದ್ದ ರೂಪಾಯಿ 68,602/- ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಪುರುಷೋತ್ತಮ ಎಂ.ರವರು ನೀಡಿದ ದೂರಿನಂತೆ ಕುಂದಾಫುರ ಠಾಣಾ ಅಪರಾಧ ಕ್ರಮಾಂಕ 108/2015 ಕಲಂ:454, 457, 380 .ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: