Sunday, April 05, 2015

Daily Crimes Reported as On 05/04/2015 at 07:00 Hrs


ಅಪಘಾತ ಪ್ರಕರಣ
  • ಕುಂದಾಪುರ ಸಂಚಾರ:ದಿನಾಂಕ 04/04/2015  ರಂದು ಮಧ್ಯಾಹ್ನ ಸುಮಾರು 3:30  ಗಂಟೆಗೆ ಕುಂದಾಪುರ ತಾಲೂಕು  ಬಸ್ರೂರು ಗ್ರಾಮದ  ಬಿ.ಹೆಚ್‌‌  ಕ್ರಾಸ್ ಬಳಿ ರಾಜ್ಯ  ರಸ್ತೆಯಲ್ಲಿ ಆಪಾದಿತ ದುರ್ಗೇಶ ಮೋಗವೀರ ಎಂಬವರು KA 20 B 1930 ಅಟೋರಿಕ್ಷಾವನ್ನು ಸಿದ್ದಾಪುರ  ಕಡೆಯಿಂದ  ಕುಂದಾಪುರ ಕಡೆಗೆ ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ರಸ್ತೆಯ  ತೀರ ಬಲಬದಿಗೆ  ಬಂದು ಬಳಿಕ ಒಮ್ಮಲೆ ರಸ್ತೆಯ ಎಡಕ್ಕೆ ಚಲಾಯಿಸಿ ಮಂಜುನಾಥ ಆಚಾರಿ ಎಂಬವರು ಕುಂದಾಪುರ ಕಡೆಯಿಂದ ಸಿದ್ದಾಪುರ ಕಡೆಗೆ  ಸವಾರಿ  ಮಾಡಿಕೊಂಡು ಹೋಗುತ್ತಿದ್ದ  KA 20 J 2139 ಬೈಕಿಗೆ  ಎದುರುಗಡೆಯಿಂದ ಅಪಘಾತಪಡಿಸಿದ ಪರಿಣಾಮ ಮಂಜುನಾಥ ಆಚಾರಿಯವರ ತಲೆಗೆ, ಕೆನ್ನಗೆ,  ಎಡಕಣ್ಣಿನ ಬಳಿ, ಬಲ ಕಾಲಿಗೆ ಹಾಗೂ  ಮೈ ಕೈಗೆ  ಒಳನೋವು ಹಾಗೂ ರಕ್ತಗಾಯವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ  ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.ಈ ಬಗ್ಗೆ ಮಹೇಶ ಆಚಾರಿ (37) ತಂದೆ:ದಾಮೋದರ ಆಚಾರಿ, ವಾಸ:ಪಾಂಚಜನ್ಯ ನಿಲಯ, ಹೆಮ್ಮಾಡಿ ಗ್ರಾಮ, ಕುಂದಾಪುರ ತಾಲೂಕುರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 35/2015 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಕ್ರಮ ಮದ್ಯ ಮಾರಾಟ ಪ್ರಕರಣ
  • ಗಂಗೊಳ್ಳಿ:ದಿನಾಂಕ:04/04/2015 ರಂದು ನೂಜಾಡಿ ಗ್ರಾಮದ ಬಗ್ವಾಡಿ ಎಂಬಲ್ಲಿ ಅಕ್ರಮ ಶರಾಬು ಮಾರಾಟ ನಡೆಯುತ್ತಿದ್ದ ಬಗ್ಗೆ ಪಿರ್ಯಾದಿದಾರರಾದ ಸುಬ್ಬಣ್ಣ ಬಿ. ಪಿಎಸ್‌ಐ, ಗಂಗೊಳ್ಳಿ ಪೊಲೀಸ್‌ ಠಾಣೆರವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಸಾಯಂಕಾಲ 07:00 ಗಂಟೆಗೆ ನೂಜಾಡಿ ಗ್ರಾಮದ ಬಗ್ವಾಡಿ ಕಲ್ಲುಕೋರೆ ಸಂಜೀವ ಪೂಜಾರಿರವರ ಅಂಗಡಿಯ ಮುಂಭಾಗ ಹಾಡಿಯಲ್ಲಿ ಅಕ್ರಮ ಶರಾಬು ಮಾರಾಟ ಮಾಡುತ್ತಿದ್ದ ಸಂಜೀವ ಪೂಜಾರಿ (40) ತಂದೆ:ದಿವಂಗತ ರಾಮ ಪೂಜಾರಿ, ವಾಸ:ಕಳಿ ತೋಟದಮನೆ, ಆಲೂರು ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆರವರನ್ನು ದಸ್ತಗಿರಿ ಮಾಡಿ 1494/- ರೂಪಾಯಿ ಮೌಲ್ಯದ MYSORE LANCER WHISKY ಹಾಗೂ ನಗದು ಹಣ 900/- ರೂಪಾಯಿಯನ್ನು ಸ್ವಾಧೀನಪಡಿಸಿಕೊಂಡಿದ್ದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 44/2015 ಕಲಂ:32, 34 ಕರ್ನಾಟಕ ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 

No comments: