ಅಸ್ವಾಭಾವಿಕ ಮರಣ
ಪ್ರಕರಣ
- ಬ್ರಹ್ಮಾವರ:ದಿನಾಂಕ:03/04/2015 ರ 01:00 ಗಂಟೆಯಿಂದ 05:00 ಗಂಟೆಯ ಮಧ್ಯದ ಅವಧಿಯಲ್ಲಿ ಉಡುಪಿ ತಾಲೂಕು ಹನೇಹಳ್ಳಿ ಗ್ರಾಮದ ರಂಗನಕೇರೆ, ಶೆಟ್ಟಿಗಾರ್ ಇಂಡಸ್ಟ್ರಿಸ್ ಫ್ಯಾಕ್ಟರಿಯ ಆವರಣದಲ್ಲಿರುವ ಗೇರು ಮರದ ಕೊಂಬೆಗೆ ಸದ್ರಿ ಪ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡು, ಫ್ಯಾಕ್ಟರಿಯ ಆವರಣದ ಶೆಡ್ಡಿನಲ್ಲಿ ವಾಸವಿದ್ದ ಪಶ್ಚಿಮ ಬಂಗಾಳ ರಾಜ್ಯದ ಸುಜನ್ಕರ್ (23) ವರ್ಷ ಎಂಬವನು ಆತನು ಪ್ರೀತಿಸುತ್ತಿದ್ದ ಹುಡುಗಿಯೊಂದಿಗೆ ಯಾವುದೋ ಮನಸ್ತಾಪ ಬಂದು, ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.ಈ ಬಗ್ಗೆ ಸುಶಾಂತ ಮಂಡಲ್ (26), ತಂದೆ:ಬಸನ್ ಮಂಡಲ್, ವಾಸ: ಇಟಾರಾ, ಸುಲೈ, ಪಾರ್ವತಿಪುರ ಗ್ರಾಮ, ಪೂರ್ವ ದೀನಾರ್ಪುರ ಜಿಲ್ಲೆ, ಪಶ್ಚಿಮ ಬಂಗಾಳ ರಾಜ್ಯ, ಪ್ರಸ್ತುತ ವಾಸ:ಶೆಟ್ಟಿಗಾರ್ ಇಂಡಸ್ಟ್ರೀಸ್, ರಂಗನಕೆರೆ, ಹನೇಹಳ್ಳಿ ಗ್ರಾಮ ಉಡುಪಿ ತಾಲೂಕುರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 17/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಪಘಾತ ಪ್ರಕರಣ
- ಮಣಿಪಾಲ:ಪಿರ್ಯಾದಿದಾರರಾದ ಸುಧೀರ್ ಶೆಟ್ಟಿ, ತಂದೆ:ರಘು ಶೆಟ್ಟಿ, ವಾಸ:ಅಂಬಲಬೆಟ್ಟು ಮನೆ, ಹಿರಿಯಡ್ಕ, ಬೊಮ್ಮರಬೆಟ್ಟು ಗ್ರಾಮ, ಉಡುಪಿ ತಾಲೂಕುರವರು ಈ ದಿನ ದಿನಾಂಕ:03/04/15 ರಂದು ತನ್ನ ಮೋಟಾರ್ ಸೈಕಲ್ ನಂಬ್ರ ಕೆಎ 20 ಇ.ಡಿ 9107 ನೇದನ್ನು ಚಲಾಯಿಸಿಕೊಂಡು ಹಿರಿಯಡ್ಕ ಕಡೆಯಿಂದ ಉಡುಪಿ ಕಡೆಗೆ ಬರುತ್ತಿರುವಾಗ ಬೆಳಿಗ್ಗೆ 7:00 ಗಂಟೆಗೆ ಹೆರ್ಗಾ ಗ್ರಾಮದ ಕೆಳಪರ್ಕಳ, ಗೋಪಾಲಕೃಷ್ಣ ದೇವಸ್ಥಾನದ ಹತ್ತಿರ ತಿರುವು ಬಳಿ ತಲುಪುವಾಗ ಎದುರಿನಿಂದ ಕೆಎ 28 ಬಿ 3574 ನೇದರ ಟ್ರ್ಯಾಕ್ಸ್ ವಾಹನದ ಚಾಲಕನು ತಾನು ಚಲಾಯಿಸಿಕೊಂಡು ಬಂದ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸುಧೀರ್ ಶೆಟ್ಟಿರವರು ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್ಗೆ ಢಿಕ್ಕಿ ಹೊಡೆದ ಪರಿಣಾಮ ಸುಧೀರ್ ಶೆಟ್ಟಿರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಅವರ ಬಲಕಾಲಿನ ಮೂಳೆ ಮುರಿತ, ಬೆರಳುಗಳ ಮೂಳೆ ಮುರಿತ, ಹಾಗೂ ಬಲಕೈಗೆ ಒಳಜಖಂ ಉಂಟಾಗಿರುತ್ತದೆ. ಸುಧೀರ್ ಶೆಟ್ಟಿರವರನ್ನು ಸದ್ರಿ ಅಪಘಾತವೆಸಗಿದ ವಾಹನದ ಚಾಲಕ ಹಾಗೂ ರಾಜೇಶ್ರವರು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಗೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲಿಸಿರುವುದಾಗಿದೆ.ಈ ಬಗ್ಗೆ ಸುಧೀರ್ ಶೆಟ್ಟಿರವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 51/15 ಕಲಂ:279,337,338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment