Thursday, April 16, 2015

Daily Crime Reports As on 16/04/2015 at 19:30 Hrs



ಹಲ್ಲೆ ಪ್ರಕರಣಗಳು

  • ಕೋಟ: ದಿನಾಂಕ 16/04/2015 ರಂದು  ಪಿರ್ಯಾದಿದಾರರಾದ ಉಮೇಶ್‌ ಪೂಜಾರಿ (37) ತಂದೆ: ದಿ ಬೀರ ಪೂಜಾರಿ ವಾಸ: ಹಳವಳ್ಳಿ ಮನೆ ಪಡುಕೆರೆ ಕೋಟತಟ್ಟು ಗ್ರಾಮ ಎಂಬವರು ಮದ್ಯಾಹ್ನ 3:00 ಗಂಟೆಗೆ ಮನೆಯಿಂದ ನಡೆದುಕೊಂಡು  ಉಡುಪಿ ತಾಲೂಕು ಕೋಟತಟ್ಟು ಗ್ರಾಮದ ಮೊಯಿದಿನ್‌ ಸಾಹೇಬರ ಜಾಗದ ಕಾಲು ದಾರಿಯಲ್ಲಿ ಹೋಗುತ್ತಿರುವಾಗ ರಾಜು ಪೂಜಾರಿ ಮತ್ತು ಸುನಿಲ್‌ ಎಂಬವರು ಪಿರ್ಯಾದಿದಾರರನ್ನು ಅಡ್ಡ ತಡೆದು ನಿಲ್ಲಿಸಿ ನಿನ್ನ ಅಪ್ಪನ ಜಾಗದಿಂದ ಮರವನ್ನು ಕಡಿಸಿ ಮಾರಾಟ ಮಾಡುತ್ತೀಯಾ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು, ಆರೋಪಿತರು  ಕೈಯಿಂದ ಹೊಡೆದು, ಕಾಲಿನಿಂದ ತುಳಿದ ಪರಿಣಾಮ ಮೈಕೈ ಗೆ ಗುದ್ದಿದ ನೋವಾಗಿರುತ್ತದೆ ಎಂಬುದಾಗಿ ಉಮೇಶ್‌ ಪೂಜಾರಿ ರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 73/2015 ಕಲಂ 341, 323, 504 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 

  • ಹಿರಿಯಡ್ಕ: ಉಡುಪಿ ತಾಲೂಕು ಅಂಜಾರು ಗ್ರಾಮದ ಉಡುಪಿ ಜಿಲ್ಲಾ ಕಾರಾಗ್ರಹದ ಬ್ಯಾರಕ್ ನಂಬ್ರ 1 ರಲ್ಲಿ ನ್ಯಾಯಾಂಗ ಬಂಧನದಲ್ಲಿ ಇರುವ  ಪಿರ್ಯಾದಿದಾರರಾದ ಪ್ರಶಾಂತ್ ಮೊಗವೀರ ಪ್ರಾಯ: 22 ವರ್ಷ ತಂದೆ: ಶೇಖರ ವಾಸ: ಗೋಪಾಡಿ, ದೇವಸ್ಥಾನದ ಹಿಂಬದಿ ಕೋಟೇಶ್ವರ ಅಂಚೆ ಬೀಜಾಡಿ ಗ್ರಾಮ ಕುಂದಾಪುರ ತಾಲೂಕು ಎಂಬವರಿಗೆ ದಿನಾಂಕ: 14/04/2015 ರಂದು ಬೆಳಿಗ್ಗೆ 08:30 ಗಂಟೆಗೆ ಅದೇ ಬ್ಯಾರಕ್  ನಲ್ಲಿ ಇರುವ ಹೆಸರು ತಿಳಿಯದ ಓರ್ವ ಖೈದಿಯು ಬಲಕೈ ಬೆರಳುಗಳನ್ನು ತಿರುಚಿ ಕೈಯಿಂದ ಹೊಡೆದು ಕಾಲಿನಿಂದ ತುಳಿದು ಹಲ್ಲೆ ನಡೆಸಿ ನಂತರ ಮಧ್ಯಾಹ್ನ 3:30 ಗಂಟೆಯ ವೇಳೆಗೆ ಪಿರ್ಯಾದುದಾರರ ತಲೆಯನ್ನು ಕೈಗಳಿಂದ ಗಟ್ಟಿಯಾಗಿ ಹಿಡಿದು ಗೋಡೆಗೆ ತಲೆಯನ್ನು ಜಜ್ಜಿ ನೋವುಂಟುಮಾಡಿದ್ದು ಪಿರ್ಯಾದುದಾರರನ್ನು ಜೈಲಿನ ಸಿಬ್ಬಂದಿಯವರು ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬುದಾಗಿ ಪ್ರಶಾಂತ್ ಮೊಗವೀರ ರವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 27/2015 ಕಲಂ 323 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: