ಕೊಲೆ ಪ್ರಕರಣ
- ಮಲ್ಪೆ: ಪಿರ್ಯಾದಿದಾರರಾದ ಧರಣೇಂದ್ರ ಕುಮಾರ್, ಪ್ರಾಯ: 55 ವರ್ಷ, ತಂದೆ: ಕೆ.ಆರ್ ಬಂಗೇರ, ವಾಸ: ಸುದರ್ಶನ್ ಐಸ್ ಪ್ಲ್ಯಾಂಟ್ ಹತ್ತಿರ, ಮಲ್ಪೆ, ಕೊಡವೂರು ಗ್ರಾಮ, ಉಡುಪಿ ತಾಲೂಕು ರವರು ಮೀನುಗಾರಿಕೆ ಇಲಾಖೆಗೆ ಸೇರಿದ ಕೊಡವೂರು ಗ್ರಾಮದ ಮಲ್ಪೆಯಲ್ಲಿ ಮೀನು ಒಣಗಿಸುವ ಒಂದು ಜಾಗ ಹೊಂದಿದ್ದು ಕಳೆದ 2-3 ತಿಂಗಳಿನಿಂದ ಒಬ್ಬ ಗಂಡಸು ಮತ್ತು ಅವನೊಂದಿಗೆ ಅವನಿಗೆ ಪರಿಚಿತನಾದ ಶೇಖರಪ್ಪ ರಾತ್ರಿ ವೇಳೆಯಲ್ಲಿ ಉಳಿದುಕೊಳ್ಳುತ್ತಿದ್ದರು ದಿನಾಂಕ 11-04-2015 ರಂದು 12:00 ಗಂಟೆಗೆ ಸದ್ರಿ ಶೇಡ್ ಗೆ ಶೇಖರಪ್ಪ ಹಾಗೂ ಆ ಅಪರಿಚಿತ ಗಂಡಸು ಪಿರ್ಯಾದಿದಾರರ ಮನೆ ಮುಂದಿನ ರಸ್ತೆಯಲ್ಲಿ ಒಟ್ಟಿಗೆ ಹೋಗುತ್ತಿದ್ದನ್ನು ನೋಡಿರುತ್ತಾರೆ. ದಿನಾಂಕ 12/04/2015 ರಂದು ಪಿರ್ಯಾದಿದಾರರಿಗೆ ಪರಿಚಯದ ಸುಲೇಮಾನ್ ಎಂಬವರು ಪೋನ್ ಮಾಡಿ ಅವರ ಶೆಡ್ ಮುಂದೆ ಒಬ್ಬ ಗಂಡಸಿನ ಮೃತ ದೇಹವು ಇರುತ್ತದೆ ಎಂದು ತಿಳಿಸಿದ್ದು ಪಿರ್ಯಾದುದಾರರು ಹೋಗಿ ನೋಡಿದಾಗ ಮೃತನ ದೇಹದ ತಲೆಯಲ್ಲಿ ರಕ್ತಗಾಯವಾಗಿದ್ದು ಕಂಡು ಬಂದಿರುತ್ತದೆ. ಮೃತ ದೇಹದ ಕಾಲಿನ ಸಮೀಪ ಒಂದು ಸುತ್ತಿಗೆ ಬಿದ್ದಿದ್ದು ಅದರಲ್ಲಿ ರಕ್ತ ಒಣಗಿದ್ದು ಕಂಡು ಬಂದಿರುತ್ತದೆ. ರಾತ್ರಿ ವೇಳೆಯಲ್ಲಿ ಗಲಾಟೆ ಮಾಡಿ ಅಪರಿಚಿತ ವ್ಯಕ್ತಿಗೆ ಶೇಖರಪ್ಪ ಎಂಬವರು ತಲೆಗೆ ಹೊಡೆದು ಪೆಟ್ಟಾದದುನ್ನು ಕಂಡು ಅವನನ್ನು ಅಲ್ಲಿಯೇ ಬಿಟ್ಟು ಹೋಗಿರಬಹುದಾಗಿ ಕಂಡು ಬಂದಿರುತ್ತದೆ. ಈ ಘಟನೆಯನ್ನು ಶೇಖರಪ್ಪನು ಮಾಡಿರಬಹುದು ಎಂದು ಕಂಡುಬರುತ್ತದೆ ಎಂಬುದಾಗಿ ಧರಣೇಂದ್ರ ಕುಮಾರ್ ರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 56/2015 ಕಲಂ 302 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ
ಪ್ರಕರಣಗಳು
- ಕಾರ್ಕಳ: ದಿನಾಂಕ 11/04/2015 ರಂದು ಮಧ್ಯ ರಾತ್ರಿಯಿಂದ ದಿನಾಂಕ 12/04/2015 ರ ಬೆಳಿಗ್ಗೆ 6:00 ಗಂಟೆಯ ಮಧ್ಯಾವಧಿಯಲ್ಲಿ ಕಾರ್ಕಳ ತಾಲೂಕು ಬಂಗ್ಲೆಗುಡ್ಡೆ ಶ್ರೀ ದೇವಿ ಕಾಲೋನಿ ನಿವಾಸಿ ಸದಾನಂದ ಎಂಬವರು ತನಗಿರುವ ಅನಾರೋಗ್ಯದ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆ ಸಮೀಪದಲ್ಲಿರುವ ಮರದ ಕೊಂಬೆಗೆ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬುದಾಗಿ ಧರ್ಮರಾಜ (44), ತಂದೆ: ದಿ ಜಾನಿ, ವಾಸ: ಮಾರ್ಕೇಟ್ ರೋಡ್, ಕಸಬ ಕಾರ್ಕಳ ರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 13/2015 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
- ಕಾಪು: ದಿನಾಂಕ 12/04/2015 ರಂದು 06:50 ಗಂಟೆಗೆ ಪಿರ್ಯಾದಿದಾರರಾದ ಜೆಸ್ನಾ ಪ್ರೆನಿಟಾ ಡೇಸಾ (20) ತಂದೆ: ಗಾಡ್ವಿನ್ ಲಾರೆನ್ಸ್ ಡೇಸಾ ವಾಸ: ಜಾಸ್ಮೀನ್ ಹೌಸ್ ಪಾಂಗಾಳ ಗ್ರಾಮ ಉಡುಪಿ ತಾಲೂಕು ರವರು ಹಾಗೂ ಅವರ ತಂದೆ ಶಂಕರಪುರ ಚರ್ಚ್ಗೆ ಪ್ರಾರ್ಥನೆಗೆ ಹೋದ ಸಮಯದಲ್ಲಿ ಪಿರ್ಯಾದಿದಾರರ ತಾಯಿ ಶ್ರೀಮತಿ ಸಿಸಿಲಿಯಾ ಪ್ರಮೀಳಾ ಡೇಸಾ (41) ರವರು ಮಾನಸಿಕ ಖಿನ್ನತೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 12/04/2015 ರಂದು 06:50 ಗಂಟೆಯಿಂದ 08:00 ಗಂಟೆ ಮಧ್ಯಾವಧಿಯಲ್ಲಿ ಮನೆಯ ಅಡುಗೆ ಕೋಣೆಯ ಮರದ ಜಂತಿಗೆ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟಿರುವುದಾಗಿದೆ ಎಂಬುದಾಗಿ ಜೆಸ್ನಾ ಪ್ರೆನಿಟಾ ಡೇಸಾ ರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 11/2015 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment