Wednesday, April 08, 2015

Daily Crime Reports As on 08/04/2015 at 19:30 Hrs



ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 08/04/2015 ರಂದು ಸಮಯ  ಸುಮಾರು  ಮಧ್ಯಾಹ್ನ 02:15 ಗಂಟೆಗೆ ಕುಂದಾಪುರ ತಾಲೂಕು  ಕುಂದಾಪುರ ಕಸಬಾ ಗ್ರಾಮದ ಶಾಸ್ತ್ರಿ ಸರ್ಕಲ್ ಬಳಿ ರಾ.ಹೆ 66 ರಸ್ತೆಯಲ್ಲಿ ಆಪಾದಿತ ಬಸವ ಪೂಜಾರಿ ಎಂಬವರು KA20-D-368  ನೇ ಟಿಪ್ಪರ್ ಲಾರಿಯನ್ನು ಕೋಟೇಶ್ವರ ಕಡೆಯಿಂದ ಹೆಮ್ಮಾಡಿ ಕಡೆಗೆ ಅತೀ ವೇಗ ಹಾಗೂ  ಅಜಾಗರುಕತೆಯಿಂದ ಚಲಾಯಿಸಿಕೊಂಡು ರಸ್ತೆಯ  ತೀರ ಎಡ ಬದಿಗೆ ಚಲಾಯಿಸಿ ಫಿರ್ಯಾದಿದಾರರಾದ ತೇಜಪ್ಪ ಶೆಟ್ಟಿ ಪ್ರಾಯ 60  ವರ್ಷ ತಂದೆ ದಿ: ಗೋವಿಂದ ಶೆಟ್ಟಿ ವಾಸ: ಮೇಲ್ಮನೆ, ಮೊರ್ಟು, ಬೆಳ್ಳಾಲ ಗ್ರಾಮ, ರವರು ಕೋಟೇಶ್ವರ ಕಡೆಯಿಂದ ಶಾಸ್ತ್ರಿ ಸರ್ಕಲ್ ಕಡೆಗೆ ರಾ.ಹೆ ರಸ್ತೆಯ ಪಶ್ಚಿಮ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂದುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರ ಎಡ ಕಾಲಿನ ಪಾದದ ಬೆರಳುಗಳಿಗೆ ಜಜ್ಜಿದ ಗಾಯ ಹಾಗೂ ಎಡ ಕಾಲಿಗೆ ತರಚಿದ ಗಾಯವಾಗಿ ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ತೇಜಪ್ಪ ಶೆಟ್ಟಿ ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಪ್ರಕರಣ ಕ್ರಮಾಂಕ: 36/15 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: