Tuesday, April 07, 2015

Daily Crime Reports As on 07/04/2015 at 19:30 Hrs

ಅಪಘಾತ ಪ್ರಕರಣಗಳು
  • ಬೈಂದೂರು: ದಿನಾಂಕ 06/04/2015 ರಂದು ರಾತ್ರಿ ಸುಮಾರು 8:45 ಗಂಟೆಗೆ ಹೆರಂಜಾಲು ಗ್ರಾಮದ ಶೇಡಿಗುಡ್ಡೆ ತಿರುವಿನಲ್ಲಿ, ಹೆರಂಜಾಲು ಕಡೆಯಿಂದ ಕಂಬದಕೋಣೆ ಕಡೆಗೆ ಕೆಎ 20 ವೈ 4032 ನೇ ನಂಬ್ರದ ಮೋಟಾರು ಸೈಕಲ್ ಸವಾರ ರಾಘವೇಂದ್ರ ದೇವಾಡಿಗ ಎಂಬಾತನು ತನ್ನ ಮೋಟಾರು ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಡು ಬಂದು ಕಂಬದಕೋಣೆ ಕಡೆಯಿಂದ ಶೇಡಿಗುಡ್ಡೆ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸೂರ ಪೂಜಾರಿ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಸೂರ ಪೂಜಾರಿರವರ ಎಡಕಾಲಿಗೆ ರಕ್ತಗಾಯವಾಗಿದ್ದು, ಅಪಘಾತ ಪಡಿಸಿದ ಮೋಟಾರು ಸೈಕಲ್ ಸವಾರನಿಗೂ ಸಣ್ಣಪುಟ್ಟ ತರಚಿದ ಗಾಯವಾಗಿರುತ್ತದೆ ಎಂಬುದಾಗಿ ಮಹೇಶ್ ಪ್ರಾಯ: 34 ವರ್ಷ ತಂದೆ: ನರಸಿಂಹ ಗಾಣಿಗ ವಾಸ: ಹೆರಂಜಾಲು ಗ್ರಾಮ ಕುಂದಾಪುರ ತಾಲುಕು  ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 80/2015 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾಪು: ದಿನಾಂಕ 06-04-2015 ರಂದು ಸಂಜೆ 7:00 ಗಂಟೆಗೆ ಪಿರ್ಯಾದಿದಾರರಾದ ನೂರ್‌ಸಾಬ್‌ (18) ತಂದೆ: ರಾಜೆಸಾಬ್‌ ನದಾಫ್ ವಾಸ: ಸತ್ಯನಿಲಯ ವಿದ್ಯನಿಕೇತನ ಶಾಲೆಯ ಎದುರು ಪಡು ಗ್ರಾಮ ಉಡುಪಿ ಜಿಲ್ಲೆ ರವರು ತನ್ನ ಸೈಕಲ್‌ನಲ್ಲಿ ಸಹ ಸವಾರರನ್ನಾಗಿ ಪಕೀರಪ್ಪ ಎಂಬವರನ್ನು ಕುಳ್ಳಿರಿಸಿಕೊಂಡು ಕಾಪು ಪೇಟೆಯಿಂದ ಮೂಳೂರು ಕಡೆಗೆ ರಾ.ಹೆ 66 ರಲ್ಲಿ ಹೋಗುತ್ತಿರುವಾಗ ಕಾಪು ಪಡು  ಗ್ರಾಮದ ವಿದ್ಯಾನಿಕೇತನ ಶಾಲೆಯ ಎದುರು ತಲುಪುತ್ತಿದ್ದಂತೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಕೆಎ 19 ಎಂ.ಸಿ 4673 ನೇ ಕಾರು ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸೈಕಲ್‌ಗೆ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಸೈಕಲ್‌ ಸಮೇತ ರಸ್ತೆಗೆ ಬಿದ್ದಿದ್ದು, ಈ ಅಪಘಾತದಿಂದ ಪಿರ್ಯಾದಿದಾರರಿಗೆ ಬಲ ಕೈಗೆ, ತಲೆಗೆ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಹಾಗೂ ಸಹ ಸವಾರನಾದ ಪಕೀರಪ್ಪನಿಗೆ ತಲೆಗೆ ಹಾಗೂ ಬಲ ಕೈಗೆ ರಕ್ತ ಬರುವ ಗಾಯವಾಗಿದ್ದು  ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬುದಾಗಿ ನೂರ್‌ಸಾಬ್‌ ರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 70/2015 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: