ಅಸ್ವಾಭಾವಿಕ ಮರಣ ಪ್ರಕರಣ
- ಕಾರ್ಕಳ: ದಿನಾಂಕ 02/04/2015 ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ 03/04/2015 ರಂದು ಮಧ್ಯಾಹ್ನ 12:00 ಗಂಟೆಯ ಮಧ್ಯೆ ಕಾರ್ಕಳ ತಾಲೂಕಿನ ಕಸಬ ಗ್ರಾಮದ ರಥ ಬೀದಿಯಲ್ಲಿರುವ ಗಣೇಶ್ ಶೆಣೈ ಎಂಬವರ ಬಾಡಿಗೆ ಕೋಣೆಯಲ್ಲಿ ವಾಸವಿದ್ದ ಪಿರ್ಯಾದುದಾರರಾದ ವಿನೋದ್ ಕೆ ಗೌಡ, ಪ್ರಾಯ 28 ವರ್ಷ, ತಂದೆ: ಕೃಷ್ಣಪ್ಪ ಗೌಡ ಕೆ. ವಾಸ: ಕುಂಟಿನಿ ಮನೆ, ಉಪ್ಪಿನಂಗಡಿ ಅಂಚೆ, ಪುತ್ತೂರು ತಾಲೂಕು. ದ.ಕ. ಜಿಲ್ಲೆ ಎಂಬವರ ಭಾವ 27 ವರ್ಷ ಪ್ರಾಯದ ಗಣೇಶ ಗೌಡ ಎಂಬವರು ಯಾವುದೋ ಕಾರಣದಿಂದ ಜೀವನದಲ್ಲಿ ಜುಗುಪ್ಸೆಗೊಂಡು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ವಿನೋದ್ ಕೆ ಗೌಡ ರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 9/2015 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ
No comments:
Post a Comment