ಹೆಂಗಸು ಕಾಣೆ ಪ್ರಕರಣ :
- ಕಾರ್ಕಳ ನಗರ : 2014ನೇ ಸಪ್ಟಂಬರ್ ತಿಂಗಳ ಅಂತ್ಯದಿಂದ ಶ್ರೀಮತಿ ರೇವತಿ ಪುರಾಣಿಕ್ @ ಭಾಗೀರಥಿ ಪುರಾಣಿಕ್, 40 ವರ್ಷ , ವಾಸ: ಮೂಡು ಗಣಪತಿ ದೇವಸ್ಥಾನ, ಬಂಡೀಮಠ, ಕಾರ್ಕಳ ಇವರ ಮನೆಯಾದ ಕಾರ್ಕಳ ಕಸಬ ಗ್ರಾಮದ ಬಂಡೀಮಠ ಮೂಡು ಗಣಪತಿ ದೇವಸ್ಥಾನದ ಬಳಿ ಎಂಬಲ್ಲಿ ಇವರೊಂದಿಗೆ ವಾಸವಿದ್ದ ಚಿತ್ರದುರ್ಗ, ಚಳ್ಳಕೆರೆಯ ನಿವಾಸಿ 23 ವರ್ಷ ಪ್ರಾಯದ ಮಂಗಳ ತಿರುಮಲೇಶ್ @ ರೋಜಾ ಎಂಬವರು ದಿನಾಂಕ 11/02/2015 ರಂದು ರಾತ್ರಿ 1:00 ಗಂಟೆಯಿಂದ ದಿನಾಂಕ 12/02/2015 ರಂದು ಬೆಳಗ್ಗೆ 9:30 ಗಂಟೆಯ ಮಧ್ಯೆ ಯಾರಲ್ಲೂ ಹೇಳದೆ, ಕೇಳದೆ ಮನೆಯಿಂದ ಹೊರಗೆ ಹೋದವಳು ಈ ದಿನದವರೆಗೂ ವಾಪಾಸು ಮನೆಗೆ ಬಾರದೇ ಕಾಣೆಯಾಗಿರುತ್ತಳೆ ಎಂಬುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 16/2015 ಕಲಂ ಹೆಂಗಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.
- ಮಣಿಪಾಲ: ಹಿಲಾರಿ ಡಿ’ಸೋಜಾ, ತಂದೆ:ದಿ.ಬೆನೆಡಿಕ್ಟ್ ಡಿ’ಸೋಜಾ, ವಾಸ: ಪೆರಂಪಳ್ಳಿ ಚರ್ಚ್ ಬಳಿ, ಶಿವಳ್ಳಿ ಗ್ರಾಮ, ಉಡುಪಿ ಇವರು ದಿನಾಂಕ 26-02-15ರಂದು ಬೆಳಿಗ್ಗೆ 7:15ಗಂಟೆಗೆ ಮನೆಯಿಂದ ಕೆಲಸದ ಬಗ್ಗೆ ಒಂದು ಆಟೋರಿಕ್ಷಾದಲ್ಲಿ ಮಣಿಪಾಲಕ್ಕೆ ಬರುವಾಗ ಪೆರಂಪಳ್ಳಿ ರಸ್ತೆಯ ಶಾಂಭವಿ ಹೆಬಿಟೆಡ್ ಕಟ್ಟಡದ ಬಳಿ ರಸ್ತೆಯ ಎಡಬದಿಯಲ್ಲಿ ಓರ್ವ ಮೋಟಾರ್ ಬೈಕ್ ಸವಾರ ರಸ್ತೆಯಲ್ಲಿ ಅಡ್ಡಬಿದ್ದು ತೀವ್ರ ಜಖಂಗೊಂಡಿದ್ದು, ಹಿಲಾರಿ ಡಿ’ಸೋಜಾರು ರಿಕ್ಷಾವನ್ನು ನಿಲ್ಲಿಸಿ ಹತ್ತಿರ ಹೋಗಿ ನೋಡಿದಾಗ ಅವರು ಪರಿಚಯದ ಗದಿಗಪ್ಪನಾಗಿದ್ದು, ಅವರನ್ನು ಅದೇ ರಿಕ್ಷಾದಲ್ಲಿ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಮ್ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ. ಗದಿಗಪ್ಪನ ಕೆಎ20ಕೆ9770 ಮೋಟಾರ್ ಸೈಕಲ್ಗೆ ಯಾವುದೋ ವಾಹನ ಢಿಕ್ಕಿ ಹೊಡೆದು ಅಪಘಾತವೆಸ ಗಿದ್ದಾಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 26/15 ಕಲಂ. 279,338 ಐಪಿಸಿ, & ಕಲಂ 134(ಎ)(ಬಿ) ಐಎಮ್ವಿ ಕಾಯಿದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment