Daily Crimes Reported as On 01/02/2015 at 17:00 Hrs
- ಕುಂದಾಪುರ:ಕುಂದಾಪುರ ತಾಲೂಕು ತಲ್ಲೂರು ಗ್ರಾಮದ ಲಕ್ಷ್ಮಿ
ಹೋಮ್ ಇಂಡಸ್ಟ್ರಿಸ್ ಎಂಬ ಫ್ಯಾಕ್ಟರಿಯಲ್ಲಿ ಸುಮಾರು 3 ವರ್ಷದಿಂದ ಸೇಲ್ಸ್ಮೆನ್ ಆಗಿ ಕೆಲಸ
ಮಾಡಿಕೊಂಡಿದ್ದ ಶಿವಮೊಗ್ಗದ ಅಮರ (21) ತಂದೆ:ಉಮೇಶ್ ವಾಸ:ಎಮ್ಮೆಹಟ್ಟಿ, ಹೊಳೆಹೊನ್ನೂರು ಅಂಚೆ,
ಭದ್ರಾವತಿ ತಾಲೂಕು, ಶಿವಮೊಗ್ಗ ಜಿಲ್ಲೆ ಎಂಬವರು ದಿನಾಂಕ:30/01/2015 ರ ಸಂಜೆ 7:00 ಗಂಟೆಗೆ ಪೇಟೆ
ಕಡೆಗೆ ಹೋದವರು ವಾಪಾಸು ಮರಳಿ ಬಾರದೆ ಕಾಣೆಯಾಗಿದ್ದು, ಈ ಬಗ್ಗೆ ಶಿವಮೊಗ್ಗ ಜಿಲ್ಲೆಯ
ಹೊಳೆಹೊನ್ನೂರಿನಲ್ಲಿರುವ ಆತನ ಮನೆಯಲ್ಲಿ ವಿಚಾರಿಸಿದಾಗ ಪತ್ತೆಯಾಗಿರುವುದಿಲ್ಲ. ಆತನಿಗೆ
ಬುದ್ದಿಮಾತು ಹೇಳಿದ ಕಾರಣದಿಂದಲೇ ಖಾಯಂ ವಿಳಾಸಕ್ಕೂ ಹೋಗದೇ ಫ್ಯಾಕ್ಟರಿಗೂ ಬಾರದೇ ಕಾಣೆಯಾಗಿರುವುದಾಗಿದೆ.
ಈ ಬಗ್ಗೆ ಅಭಿಷೇಕ್ ಶೆಟ್ಟಿ (26) ತಂದೆ:ಕೆ. ಹರ್ಷವರ್ಧನ್ ಶೆಟ್ಟಿ ವಾಸ:ಸೌಪರ್ಣಿಕ, ಎನ್.ಹೆಚ್-66,
ಭಾರತ್ ಪೆಟ್ರೋಲಿಯಂ ಎದುರು, ತಲ್ಲೂರು, ಕುಂದಾಪುರ ತಾಲೂಕುರವರು ನೀಡಿದ ದೂರಿನಂತೆ ಕುಂದಾಪುರ
ಠಾಣಾ ಅಪರಾಧ ಕ್ರಮಾಂಕ 29/2105
ಕಲಂ:ಗಂಡಸು ಕಾಣೆ ಎಂಬುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಉಡುಪಿ ನಗರ:ಪಿರ್ಯಾದಿದಾರರಾದ ಶೇಖ್ ಮುಶ್ತಾಕ್ ಅಹ್ಮದ್ (43) ತಂದೆ:ಶಾಬು ಸಾಹೇಬ್ ವಾಸ:ಮನೆ ನಂ
3-1-39ಬಿ6, ನಾಗೇಶ್ ನಗರ, ಪುಷ್ಪಮೆಡಿಕಲ್ ಎದುರು ರಸ್ತೆ, ಆದಿ ಉಡುಪಿ, ಅಂಬಪಾಡಿ ಗ್ರಾಮ, ಉಡುಪಿ ತಾಲೂಕುರವರಿಗೂ ಮತ್ತು ಅವರ ಅಣ್ಣ ಅಕೀಲ್ ಅಹ್ಮದ್ರವರಿಗೂ
ಮನೆಯ ಆಸ್ತಿಯ ವಿಚಾರದಲ್ಲಿ ತಕರಾರು ಇದ್ದು, ದಿನಾಂಕ:31/01/2015
ರಂದು ರಾತ್ರಿ 10 ಗಂಟೆಗೆ ಶೇಖ್ ಮುಶ್ತಾಕ್ ಅಹ್ಮದ್ರವರ ಅಣ್ಣ ಅಕೀಲ್ ಅಹ್ಮದ್ರವರು ಶೇಖ್ ಮುಶ್ತಾಕ್ ಅಹ್ಮದ್ರವರ ಮನೆಗೆ ಬಂದು ಮನೆಯ
ಆಸ್ತಿಯ ವಿಚಾರವಾಗಿ ಮಾತುಕತೆಯಾಗಿ ಮಾತಿಗೆ ಮಾತು ಬೆಳೆದು ಶೇಖ್ ಮುಶ್ತಾಕ್ ಅಹ್ಮದ್ರವರನ್ನು ಉದ್ದೇಶಿಸಿ
ಅವಾಚ್ಯ ಶಬ್ದಗಳಿಂದ ಬೈದು, “ನೀನು, ನಿನ್ನ ಹೆಂಡತಿ ನನ್ನ ಮನೆಯಲ್ಲಿ ಇರುವುದು, ಮನೆಯಿಂದ ಹೊರಗೆ ಹೋಗಿ” ಎಂದು ಅಲ್ಲಿಯೇ ಇದ್ದ
ಮರದ ಕುರ್ಚಿಯಿಂದ ಶೇಖ್ ಮುಶ್ತಾಕ್ ಅಹ್ಮದ್ರವರಿಗೆ ಹೊಡೆಯಲು ಬಂದಿದ್ದು ಆ ಸಮಯ ತಡೆಯಲು ಬಂದು ಶೇಖ್ ಮುಶ್ತಾಕ್ ಅಹ್ಮದ್ರವರ ಹೆಂಡತಿಯಾದ ಸಂಬ್ರಿನ್
ರವರ ಎಡ ಭುಜಕ್ಕೆ ತಾಗಿ ಒಳನೋವು ಉಂಟಾಗಿದ್ದು, ಆರೋಪಿತರು ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ, ನಿಮ್ಮ ವಸ್ತುಗಳನ್ನು ಸುಟ್ಟುಹಾಕುವುದಾಗಿ ಹೇಳಿ
ಜೀವ ಬೆದರಿಕೆ ಹಾಕಿರುತ್ತಾರೆ. ಶೇಖ್ ಮುಶ್ತಾಕ್ ಅಹ್ಮದ್ರವರ ಹೆಂಡತಿಯನ್ನು ಚಿಕಿತ್ಸೆಯ ಬಗ್ಗೆ ಜಿಲ್ಲಾ
ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಪರೀಕ್ಷಿಸಿದ ವೈದ್ಯರು
ಹೊರರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ.ಈ
ಬಗ್ಗೆ ಶೇಖ್ ಮುಶ್ತಾಕ್ ಅಹ್ಮದ್ರವರು ನೀಡಿದ ದೂರಿನಂತೆ ಉಡುಪಿನಗರ ಠಾಣಾ ಅಪರಾಧ ಕ್ರಮಾಂಕ 19/2015 ಕಲಂ:504,324,506 ಐಪಿಸಿಯಂತೆ
ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment