ಅಪಘಾತ ಪ್ರಕರಣ
- ಕೋಟ: ಪಿರ್ಯಾದಿದಾರರಾದ ರಮೇಶ್ ಜಿ (25), ತಂದೆ: ದಿ. ಗಜೇಂದ್ರ, ವಾಸ: ತೋಟದ ಮನೆ, ಕುಂಜಿಗುಡಿ, ಸಾಲಿಗ್ರಾಮ, ಕಾರ್ಕಡ ಗ್ರಾಮ, ಉಡುಪಿ ತಾಲೂಕು ರವರು ದಿನಾಂಕ 26/02/2015 ರಂದು ತನ್ನ ಸ್ನೇಹಿತ ಸತೀಶರವರನ್ನು ತನ್ನ ಸುಜುಕಿ ಫಿಯಾರೋ ಮೋಟಾರ್ ಸೈಕಲ್ ನಂಬ್ರ KA 03 EC 5942 ನೇದರಲ್ಲಿ ಸಹ ಸವಾರನಾಗಿ ಕುಳ್ಳಿರಿಸಿಕೊಂಡು ರಾ.ಹೆ 66 ರಲ್ಲಿ ಸಾಲಿಗ್ರಾಮದಿಂದ ಕುಂದಾಪುರ ಕಡೆಗೆ ಹೋಗುತ್ತಾ ಉಡುಪಿ ತಾಲೂಕು ಮಣೂರು ಗ್ರಾಮದ ಪಟ್ಟಾಭಿ ರಾಮಚಂದ್ರ ಹೋಟೆಲ್ ಎದುರು ತಲುಪುವಾಗ ಬೆಳಿಗ್ಗೆ 10.30 ಗಂಟೆಗೆ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ MH 04 FD 1482 ನೇ ಗೂಡ್ಸ್ ಟೆಂಪೋವನ್ನು ಚಾಲಕ ಉಸ್ಮಾನ್ ಎಂಬವರು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರು ಸೈಕಲ್ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸಮೇತ ಸರ್ವಿಸ್ ರಸ್ತೆಗೆ ಬಿದ್ದು ಪಿರ್ಯಾದಿದಾರು ಮತ್ತು ಸಹಸವಾರ ಸತೀಶ್ ರವರು ಸಾದಾ ಸ್ವರೂಪದ ಗಾಯಗೊಂಡು ಕೊಟೇಶ್ವರ ಎನ್.ಆರ್.ಆಚಾರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ ಎಂಬುದಾಗಿ ರಮೇಶ್ ಜಿ ರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 39/2015 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment