Wednesday, January 28, 2015

Daily Crime Reports As on 28/01/2015 at 19:30 Hrs



ಅಪಘಾತ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಅಮಿತಾ(22) ತಂದೆ: ನಾರಾಯಣ ಮೂಲ್ಯ, ವಾಸ: ಎನ್ ವೈ ನಿವಾಸ, ಸಾನದ ಗುಡ್ಡೆ, ನಿಟ್ಟೆ ಗ್ರಾಮ ಎಂಬವರ ತಂದೆ 57 ವರ್ಷ ಪ್ರಾಯದ ನಾರಾಯಣ ಮೂಲ್ಯ ಎಂಬುವರು ದಿನಾಂಕ 27.01.2015 ರಂದು ಕಾರ್ಕಳದ ಗೊಮ್ಮಟೇಶ್ವರ ಮಹಾಮಸ್ತಾಕಾಭಿಷೇಕ ನೋಡಲು ಹೋದವರು, ವಾಪಸ್ಸು ಮನೆಗೆಂದು ಹೊರಟು ಕಾರ್ಕಳದಿಂದ ಲಕ್ಷ್ಮಿ ಗಣೇಶ್ ಬಸ್ಸಿನಲ್ಲಿ ಬಂದು ಕಾರ್ಕಳ ತಾಲೂಕು ನಿಟ್ಟೆ ಗ್ರಾಮ ಲೆಮಿನಾ ಕ್ರಾಸ್ ಎಂಬಲ್ಲಿ ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ನಿಲ್ಲಿಸಿದ ಬಸ್ಸಿನಿಂದ ರಾತ್ರಿ 7:20 ಗಂಟೆ ಸುಮಾರಿಗೆ ಇಳಿಯುತ್ತಿರುವಾಗ ಬಸ್ಸನ್ನು ಅದರ ಚಾಲಕ ಒಮ್ಮೆಲೆ ನಿರ್ಲಕ್ಷತನದಿಂದ ಮುಂದಕ್ಕೆ ಚಲಾಯಿಸಿದ ಪರಿಣಾಮ ನಾರಾಯಣ ಮೂಲ್ಯರು ಬಸ್ಸಿನ ಬಾಗಿಲಿನಿಂದ ರಸ್ತೆಗೆ ಬಿದ್ದು ತಲೆಗೆ ತೀವೃ ತರದ ಗಾಯಗೊಂಡು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾ, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 28.01.2015 ರ ಮದ್ಯಾಹ್ನ 12:30 ಗಂಟೆಗೆ ಮೃತಪಟ್ಟಿರುತ್ತಾರೆ ಎಂಬುದಾಗಿ ಅಮಿತಾರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 12/2015 ಕಲಂ: 279, 304() ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

No comments: